Advertisement

ಕೆರೆ ಭರ್ತಿಗಾಗಿ ಒತ್ತಾಯಿಸಿ ಹೆದ್ದಾರಿ ಬಂದ್‌

02:54 PM Jan 22, 2020 | Suhan S |

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ಕಾರ್ಖಾನೆ ನೀರು ಪಡೆಯುತ್ತಿರುವ ಜೆಎಸ್‌ಡಬ್ಲ್ಯೂ ಸಂಸ್ಥೆ, ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಬೈಲುವದ್ದಿಗೇರಿ ಗ್ರಾಮದ ಕೆರೆ ಭರ್ತಿ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ ಕೆರೆ ಪಕ್ಕದಲ್ಲಿ ಜಮಾವಣೆಗೊಂಡ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ತಮ್ಮೆಲ್ಲ ದನ-ಕರು-ಕುರಿ-ಮೇಕೆಗಳನ್ನು ರಸ್ತೆಯಲ್ಲಿ ಬಿಟ್ಟು, ಪ್ರತಿಭಟನೆ ನಡೆಸಿದರು. ಬೈಲುವದ್ದಿಗೇರಿ ಕೆರೆ ಪುರಾತನ ಕಾಲದಲ್ಲಿ ನಿರ್ಮಿಸಿರುವುದು. ಸಾರ್ವಜನಿಕರ ಕುಡಿಯುವ ನೀರಿನ ಸಲುವಾಗಿ ಹಾಗೂ ಜಾನುವಾರುಗಳಿಗಾಗಿ 35 ಎಕರೆಯಲ್ಲಿ ಕೆರೆ ನಿರ್ಮಿಸಲಾಗಿದೆ. ಮಳೆ ಅಭಾವದಿಂದ ಕೆರೆ ಬತ್ತಿ ಹೋಗಿದೆ. ಹಾಗಾಗಿ ಜಿಂದಾಲ್‌ ಸಂಸ್ಥೆಯ ನೀರಿನ ಪೈಪ್‌ ಲೈನ್‌ ಗ್ರಾಮದಿಂದ ಹಾದು ಹೋಗಿದೆ. ಆ ಪೈಪ್‌ಲೈನ್‌ನಿಂದ ವರ್ಷಕ್ಕೆ ಎರಡು ಬಾರಿ ಕೆರೆ ಭರ್ತಿ ಮಾಡಿಸಬೇಕು ಎಂದು ಆಗ್ರಹಿಸಿದರು.

ಬೇಸಿಗೆ ಕಾಲದಲ್ಲಿ ಜನರು ನೀರಿಗಾಗಿ ತತ್ತರಿಸಿ ಹೋಗಿದ್ದಾರೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಒಂದು ವೇಳೆ ಬೇಡಿಕೆ ಈಡೇರದಿದ್ದರೇ ಪೈಪ್‌ಲೈನ್‌ನಿಂದ ಸ್ವತಃ ತಾವೇ ಕೆರೆಗೆ ನೀರು ಹರಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಬೈಲವದ್ದಗೇರಿ ಫ‌ಣೀಂದ್ರಗೌಡ, ಅಪ್ಪಣಹಳ್ಳಿ ಗಂಗಾಧರಪ್ಪ, ಹನುವಾಳ ವಿಶ್ವನಾಥ, ಬಸವರಾಜ, ಯತ್ನಟ್ಟಿ ಯಂಕಪ್ಪ, ಕಪಗಲ್ಲ ವೀರೇಶಪ್ಪ, ಮೂಲಿಮನಿ ಗೋವಿಂದ ರೆಡ್ಡಿ, ಕೋರಿ ಫ‌ಕೀರಪ್ಪ, ಮೂಕಪ್ಪ, ಕಾಕುಬಾಳ ಜಡಿಯಪ್ಪ, ಒಳಚಿ ಜಡಿಯಪ್ಪ, ಹೊನ್ನೂರಪ್ಪ ಇನ್ನಿತರರಿದ್ದರು. ಬೈಲುವದ್ದಗೇರಿ, ಧರ್ಮಸಾಗರ, ಗುಂಡ್ಲವದ್ದಗೇರಿ ಹಾಗೂ ಕಾಕುಬಾಳು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next