Advertisement

ನ್ಯಾಯಾಂಗದಲ್ಲಿ 1 ಶೇಕಡಾ: ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಪ್ರಕರಣ ವಜಾ

09:09 PM May 30, 2022 | Team Udayavani |

ಕೋಲ್ಕತಾ : ‘ನ್ಯಾಯಾಂಗ ವ್ಯವಸ್ಥೆಯಲ್ಲಿ1 ಶೇಕಡಾ ವ್ಯವಸ್ಥೆಯಿದೆ’ಎಂದು ಹೇಳಿಕೆ ನೀಡಿದ್ದ ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್ ಸೋಮವಾರ ವಜಾ ಗೊಳಿಸಿದೆ.

Advertisement

ನ್ಯಾಯಮೂರ್ತಿ ಅಜೋಯ್ ಕುಮಾರ್ ಮುಖರ್ಜಿ, “ಈ ಹೈಕೋರ್ಟ್‌ನಲ್ಲಿ 41 ನ್ಯಾಯಾಧೀಶರಿದ್ದಾರೆ. ಯಾರನ್ನು ಉದ್ದೇಶಿಸಲಾಗಿದೆ ಅಥವಾ  ಎಂಬುದು ಸ್ಪಷ್ಟವಾಗಬೇಕು. 1 ಶೇಕಡಾ ಎಂಬ ಅಂಶವಿಲ್ಲ. ಆದ್ದರಿಂದ ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತದೆ.  ಅಭಿಷೇಕ್ ಅವರ ಹೇಳಿಕೆಗಳು ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತಂದಿದೆ ಎಂದು ಕೋರ್ಟ್ ಭಾವಿಸುವುದಿಲ್ಲ. ಈ ಬಾರಿ ಸ್ವಯಂ ಪ್ರೇರಿತ ಕ್ರಮದ ಅಗತ್ಯವಿಲ್ಲ ಎಂದಿದ್ದಾರೆ.

ನ್ಯಾಯಾಂಗ ನಿರ್ಧಾರದ ಕುರಿತು ಕಾಮೆಂಟ್‌ಗಳ ಬಗ್ಗೆ ಇಬ್ಬರು ವಕೀಲರು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರ ಗಮನ ಸೆಳೆದು, ಸ್ವಯಂ ಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸುವಂತೆ ಕಲ್ಕತ್ತಾ ಹೈಕೋರ್ಟ್ ಸಲಹೆ ನೀಡಿತ್ತು. ಆದರೆ ಉತ್ತರವನ್ನು ಕೇಳಿದ ನಂತರ, ಕಲ್ಕತ್ತಾ ಹೈಕೋರ್ಟ್ ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಸ್ವಯಂಪ್ರೇರಿತ ಪ್ರಕರಣವನ್ನು ವಜಾಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next