Advertisement

ಬಿಗ್‌ಬಾಸ್‌ನ ಪ್ರಥಮ್‌, ಭುವನ್‌ ಮಾರಾಮಾರಿ

05:15 AM Jul 24, 2017 | |

ಬೆಂಗಳೂರು : ಸಾಲ ಪಡೆದ ಹಣವನ್ನು ಹಿಂದಿರುಗಿಸದ ಅಪಾದನೆ ಮೇರೆಗೆ ಸ್ನೇಹಿತರ ಜತೆ ಜಗಳ ಮಾಡಿಕೊಂಡಿದ್ದ
ಬಿಗ್‌ಬಾಸ್‌ ಖ್ಯಾತಿಯ ಪ್ರಥಮ್‌ ಮತ್ತೂಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

Advertisement

“ನಾನು ಮತ್ತು ಸಂಜನಾ’ ಧಾರವಾಹಿ ಚಿತ್ರೀಕರಣದ ವೇಳೆ ಬಿಗ್‌ಬಾಸ್‌ನಲ್ಲಿ ಜತೆಯಾಗಿದ್ದ ಭುವನ್‌ ಮತ್ತು ಪ್ರಥಮ್‌ ನಡುವೆ ಮಾರಾಮಾರಿ ನಡೆದಿದ್ದು, ಇದೀಗ ಪ್ರಕರಣ ತಲಘಟ್ಟಪುರ ಠಾಣೆ ಮೆಟ್ಟಿಲೇರಿದೆ.

ಶನಿವಾರ ರಾತ್ರಿ ತಲಘಟ್ಟಪುರ ವ್ಯಾಪ್ತಿಯಲ್ಲಿ “ನಾನು ಮತ್ತು ಸಂಜನಾ’ ಧಾರವಾಹಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಪ್ರಥಮ್‌, ಬಿಗ್‌ಬಾಸ್‌ ಸ್ಪರ್ಧಿ ಸಂಜನಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.

ಇದಕ್ಕೆ ಆಕ್ರೋಶಗೊಂಡ ಭುವನ್‌ ಪ್ರಥಮ್‌ಗೆ ಆ ರೀತಿ ಮಾತನಾಡದಂತೆ ತಾಕೀತು ಮಾಡಿದ್ದಾರೆ. ಆಗ ಇಬ್ಬರ ನಡುವೆ ಜಗಳ ನಡೆದು ಕೋಪಗೊಂಡ ಪ್ರಥಮ್‌, ಭುವನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಹಲ್ಲೆಗೆ ಮುಂದಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಚಿತ್ರೀಕರಣದ ಸಿಬ್ಬಂದಿ ಗಲಾಟೆ ಬಿಡಿಸಿದ್ದಾರೆ. ಆದರೂ ಸುಮ್ಮನಾಗದ ಪ್ರಥಮ್‌, ಭುವನ್‌ ತೊಡೆ ಭಾಗಕ್ಕೆ ಕಚ್ಚಿದ್ದಾರೆ. ಇದನ್ನು ತಡೆಯಲು ಬಂದ ಸಿಬ್ಬಂದಿ ಮೇಲೂ ಪ್ರಥಮ್‌ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಥಮ್‌, “ನಾನು ಅಪ್ಪಟ ಸಸ್ಯಹಾರಿ. ನಾನು ಯಾರಿಗೂ ಕಚ್ಚಿಲ್ಲ. ಮೊದಲು
ಭವನ್‌ ನನ್ನ ಮೇಲೆ ಕೈ ಮಾಡಿದ್ದಾನೆ. ಅಲ್ಲಿದ್ದ ಸಿಬ್ಬಂದಿ ನಮ್ಮ ಜಗಳ ಬಿಡಿಸಿದರು’ ಎಂದಿದ್ದಾರೆ.

Advertisement

ಘಟನೆ ಬಗ್ಗೆ ಹೇಳಿಕೆ ನೀಡಿರುವ ಭುವನ್‌, ಧಾರವಾಹಿಯ ಚಿತ್ರೀಕರಣ ವೇಳೆ ಪ್ರಥಮ್‌ ತನ್ನ ತೊಡೆ ಭಾಗಕ್ಕೆ ಕಚ್ಚಿದ್ದಾನೆ. ಆತನೇ ತನ್ನ ಮೇಲೆ ಮೊದಲು ಹಲ್ಲೆ ನಡೆಸಿದ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next