Advertisement

ರಂಗನ ಹೆರಾತ್‌ ಶ್ರೀಲಂಕಾ ನಾಯಕ

03:45 AM Mar 02, 2017 | Team Udayavani |

ಕೊಲಂಬೊ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2 ಪಂದ್ಯಗಳ ಕಿರು ಟೆಸ್ಟ್‌ ಸರಣಿಯ ವೇಳೆ ಶ್ರೀಲಂಕಾ ತಂಡವನ್ನು ಸ್ಪಿನ್ನರ್‌ ರಂಗನ ಹೆರಾತ್‌ ಮುನ್ನಡೆಸಲಿದ್ದಾರೆ. ನಾಯಕ ಏಂಜೆಲೊ ಮ್ಯಾಥ್ಯೂಸ್‌ ಗಾಯಾಳಾಗಿ ಹೊರಗುಳಿಯುವುದರಿಂದ ಈ ಪರಿವರ್ತನೆ ಮಾಡಲಾಗಿದೆ.

Advertisement

ದಿನೇಶ್‌ ಚಂಡಿಮಾಲ್‌, ಉಪುಲ್‌ ತರಂಗ ಕೂಡ ನಾಯಕತ್ವದ ರೇಸ್‌ನಲ್ಲಿದ್ದರು. ಆದರೆ ಇವರನ್ನೆಲ್ಲ ಬಿಟ್ಟು ಹೆರಾತ್‌ ಮೇಲೆ ಆಯ್ಕೆಗಾರರು ವಿಶ್ವಾಸವಿರಿಸಿದರು. ಹೆರಾತ್‌ ಕಳೆದ ವರ್ಷಾಂತ್ಯದ ಜಿಂಬಾಬ್ವೆ ಪ್ರವಾಸದ ವೇಳೆಯೂ ತಂಡವನ್ನು ಮುನ್ನಡೆಸಿದ್ದರು. ಆ ಸರಣಿಯನ್ನು ಶ್ರೀಲಂಕಾ 2-0 ಅಂತರದಿಂದ ಜಯಿಸಿತ್ತು. ಹೆರಾತ್‌ 19 ವಿಕೆಟ್‌ ಉರುಳಿಸಿ ಮಿಂಚಿದ್ದರು.

ಎಡಗೈ ಸ್ಪಿನ್ನರ್‌ ಮಲಿಂದ ಪುಷ್ಪಕುಮಾರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತಂಡದ ಆಯ್ಕೆ ಕುರಿತಂತೆ ಸದ್ಯ ಈ ಎರಡು ಸಂಗತಿಗಳನ್ನಷ್ಟೇ ಮಾಧ್ಯಮಗಳಿಗೆ ತಿಳಿಸಲಾಗಿದೆ. ಸರಣಿಯ ಮೊದಲ ಟೆಸ್ಟ್‌ ಪಂದ್ಯ ಮಾ. 7ರಿಂದ ಗಾಲೆಯಲ್ಲಿ, ದ್ವಿತೀಯ ಟೆಸ್ಟ್‌ ಮಾ. 15ರಿಂದ ಕೊಲಂಬೋದಲ್ಲಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next