Advertisement

ಹೆಮ್ಮಾಡಿ : ಬ್ಯಾಂಕ್‌ವೊಂದರ ಸಿಬಂದಿಗೆ ಪಾಸಿಟಿವ್‌ ವದಂತಿ

12:14 PM Jul 11, 2020 | sudhir |

ಕುಂದಾಪುರ: ಹೆಮ್ಮಾಡಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಸಿಬಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ ಎನ್ನುವ ಸುಳ್ಳು ವದಂತಿ ಶುಕ್ರವಾರ ಎಲ್ಲೆಡೆ ಹಬ್ಬಿತ್ತು. ಆದರೆ ಅಲ್ಲಿನ ಯಾವ ಸಿಬಂದಿಗೂ ಈವರೆಗೆ ಪಾಸಿಟಿವ್‌ ಬಂದಿಲ್ಲ.
ಈ ಸುದ್ದಿ ಎಲ್ಲೆಡೆ ಹಬ್ಬಿದ್ದು, ಇದರಿಂದ ಶುಕ್ರವಾರ ಗ್ರಾಹಕರು ಬ್ಯಾಂಕಿನತ್ತ ಸುಳಿಯಲೇ ಇಲ್ಲ. ಈ ಕಾರಣಕ್ಕೆ ಬೆಳಗ್ಗೆ 11 ಗಂಟೆಯಿಂದ ಬಂದ್‌ ಮಾಡಲಾಯಿತು.

Advertisement

ಆಗಿದ್ದೇನು?
ಇದೇ ಬ್ಯಾಂಕಿನ ಶಿರೂರು ಶಾಖೆಯ ಮ್ಯಾನೇಜರ್‌ ಒಬ್ಬರಿಗೆ ಪಾಸಿಟಿವ್‌ ಬಂದಿದ್ದು, ಅಲ್ಲಿನ ಮಹಿಳಾ ಸಿಬಂದಿಯೊಬ್ಬರು ಗುರುವಾರ ಒಂದು ದಿನದ ಮಟ್ಟಿಗೆ ಬದಲಿಯಾಗಿ ಹೆಮ್ಮಾಡಿಯ ಶಾಖೆಗೆ ಕೆಲಸಕ್ಕೆ ಬಂದಿದ್ದಾರೆ. ಆದರೆ ಆ ಸಿಬಂದಿಗೆ ಕೊರೊನಾ ಇರುವುದು ದೃಢವಾಗಿಲ್ಲ. ಹಾಗಾಗಿ ಆತಂಕ ಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಸುಳ್ಳು ಸಂದೇಶವನ್ನು ರವಾನಿಸಿದ್ದು ಗೊಂದಲಕ್ಕೆ ಕಾರಣವಾಗಿದೆ.

ಸೀಲ್‌ಡೌನ್‌ ಗೊಂದಲ?
ಇಲ್ಲಿ ಸದ್ಯ ಐವರು ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕೊರೊನಾ ಪಾಸಿಟಿವ್‌ ಬಂದ ವ್ಯಕ್ತಿಯ ಎರಡನೇ ಸಂಪರ್ಕ ಆಗಿರುವುದರಿಂದ ಸೀಲ್‌ಡೌನ್‌ ಮಾಡಬೇಕೆ ? ಅಥವಾ ಬೇಡವೇ ಎನ್ನುವ ಗೊಂದಲ ಉಂಟಾಗಿದ್ದು, ಈ ಬಗ್ಗೆ ತಾಲೂಕು ಆಡಳಿತದ ಆದೇಶಕ್ಕೆ ಕಾಯುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next