Advertisement

ಹೆಬ್ರಿ ಠಾಣಾಧಿಕಾರಿ ಕರ್ತವ್ಯಕ್ಕೆ ಹಾಜರು

10:46 AM Jul 09, 2018 | |

ಹೆಬ್ರಿ: ಮೇಲಧಿಕಾರಿಗಳ ಕಿರುಕುಳ ಹಿನ್ನಲೆಯಲ್ಲಿ ಮನನೊಂದು ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದ ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ರವಿವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪೊಲೀಸ್‌ ಇಲಾಖೆ ಕೊನೆಗೂ ಆಂತರಿಕ ಗೊಂದಲವನ್ನು ಬಗೆಹರಿಸಿಕೊಂಡು ಅವರ ಮನವೊಲಿಸಿದೆ. ಜನರ ಪ್ರೀತಿಗೆ ಶರಣು ಜನರು ನನ್ನ ಮೇಲೆ ಇಟ್ಟ ಪ್ರೀತಿಗೆ ಶರಣಾಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಇಲಾಖೆಯಲ್ಲಿ ಯಾವುದೇ ಗೊಂದಲ ಇಲ್ಲ. ಅಪರಾಧಗಳು ಆಗದಂತೆ ತಡೆಯಲು ಜನರ ಸಹಕಾರ ಅಗತ್ಯ. ಅಂತಹ ಸಹಕಾರವನ್ನು ಹೆಬ್ರಿ ಸುತ್ತಮುತ್ತಲಿನ ಜನತೆ ನೀಡಿದ್ದಾರೆ. ಮುಂದೆಯೂ ಹೀಗೆ ಸಹಕಾರ ಇರಲಿ ಎಂದು ಠಾಣಾಧಿಕಾರಿ ಮಹಾಬಲ ಶೆಟ್ಟಿ ಪ್ರತಿಕ್ರಿಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next