Advertisement

Hebri ಆನೆ ಹಾವಳಿ: ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ವಾಹನ ವ್ಯವಸ್ಥೆ

01:11 AM Jul 12, 2024 | Team Udayavani |

ಹೆಬ್ರಿ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯದ ಪರಿಸರದ ನೆಲ್ಲಿಕಟ್ಟೆ ಬಡಾ ತಿಂಗಳೆ ಪರಿಸರದಲ್ಲಿ ಮತ್ತೆ ಆನೆ ಹಾವಳಿ ತೀವ್ರವಾಗಿದ್ದು, ಸ್ಥಳೀಯರು ಆತಂಕದಿಂದಿದ್ದಾರೆ.

Advertisement

ಈ ಪರಿಸರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಸುಮಾರು 5 ಕಿ. ಮೀ. ನಡೆದುಕೊಂಡೇ ಬಂದು ಬಸ್ಸು ಹಿಡಿಯಬೇಕು. ಶಾಲಾ ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರು ಕಾಡಾನೆಯ ಹಾವಳಿ ಯಿಂದ ಭಯಭೀತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇಲ್ಲಿನ ನಡೆದು ಕೊಂಡು ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತೆ ಅರಣ್ಯ ಇಲಾಖೆಯ ವಲಯ ವನ್ಯಜೀವಿ ವಿಭಾಗದಿಂದ ಗ್ರಾಮೀಣ ಪ್ರದೇಶದ ಮಕ್ಕಳನ್ನು ಶಾಲೆಗೆ ಕರೆತಂದು ಮತ್ತೆ ಪುನಃ ಮನೆಗೆ ವಾಪಸ್‌ ಬಿಡಲು ಜು. 12ರಿಂದ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಇಲಾಖೆಯ ಅರಣ್ಯ ಅಧಿಕಾರಿ ಗೌರವ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next