Advertisement

ಹೆಬ್ರಿ: ಸ್ನಾನಗೃಹದಲ್ಲಿ ತಲೆ ತಿರುಗಿ ಬಿದ್ದು ಮಹಿಳೆ ಸಾವು

09:08 PM Feb 06, 2023 | Team Udayavani |

ಹೆಬ್ರಿ: ಕುಕ್ಕೆಹಳ್ಳಿ ಗ್ರಾಮದ ಜ್ಯೋತಿ ಶೆಟ್ಟಿ (42) ಅವರು ಜ್ವರ ಹಾಗೂ ತಲೆನೋವು ಕಾರಣ ಚಿಕಿತ್ಸೆ ಪಡೆದಿದ್ದು, ಫೆ. 5ರಂದು ರಾತ್ರಿ ಸ್ನಾನಗೃಹಕ್ಕೆ ಹೋದವರು ತಲೆ ತಿರುಗಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
**
ಅಂದರ್‌ – ಬಾಹರ್‌ : ಇಬ್ಬರ ಸೆರೆ
ಕುಂದಾಪುರ: ವಡೇರಹೋಬಳಿ ಗ್ರಾಮದ ಟಿ.ಟಿ. ರೋಡ್‌ನ‌ ನೀರು ಟ್ಯಾಂಕ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್‌ – ಬಾಹರ್‌ ಜುಗಾರಿ ಆಡುತ್ತಿದ್ದ ಬಗ್ಗೆ ವೃತ್ತ ನಿರೀಕ್ಷಕ ನಂದ ಕುಮಾರ್‌ ಯು.ಬಿ. ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಎಸ್‌ಐ ಪ್ರಸಾದ್‌ ಕುಮಾರ್‌ ನೇತೃತ್ವದ ಕುಂದಾಪುರ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಗಿರೀಶ್‌ ಹಾಗೂ ಬಾಳಣ್ಣ ಗೌಡರನ್ನು ಬಂಧಿಸಲಾಗಿದೆ.

Advertisement

ಸ್ಥಳದಿಂದ 6,460 ರೂ. ಹಾಗೂ ಆಟದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
**
ಕಾರು ಢಿಕ್ಕಿ: ಮಹಿಳೆಗೆ ಗಾಯ
ಗಂಗೊಳ್ಳಿ: ಪ್ರವಾಸಕ್ಕೆ ಬಂದು ತ್ರಾಸಿ ಬೀಚ್‌ ಬಳಿಯ ರಸ್ತೆ ಬದಿಯಲ್ಲಿ ನಿಂತಿದ್ದ ಮೈಸೂರಿನ ನಿವಾಸಿ ಮಹಾದೇವಿ ಅವರು ಕಾರು ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ಫೆ.5 ರಂದು ಸಂಭವಿಸಿದೆ. ಅವರ ಮಾವ ಉಮೇಶ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉಮ್ಮನ್ ಚಾಂಡಿಯವರನ್ನು ಕುಟುಂಬ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next