Advertisement

ಗ್ರಾಮದೇವತೆ ದರ್ಶನ ಪಡೆದ ಹೆಬ್ಬಾಳಕರ್‌

12:17 PM Jul 12, 2020 | Suhan S |

ಹಿರೇಬಾಗೇವಾಡಿ: ಕೋವಿಡ್ ನಿರ್ಮೂಲನೆಗಾಗಿ ಕಳೆದ 11 ಶುಕ್ರವಾರ ಗ್ರಾಮದೇವಿ ಪ್ರಾರ್ಥನೆ ಮಾಡಲಾಗಿತ್ತು. ಶುಕ್ರವಾರ ಕೊನೆಯ ಮತ್ತುವಾರ ಇಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್‌ ಪಾಲ್ಗೊಂಡು ದೇವಿ ದರ್ಶನ ಪಡೆದರು.

Advertisement

ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿ ಮತ್ತು ಮುತ್ನಾಳ ಮಠದ ಶಿವಾನಂದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವೇ.ಮೂ ಕಲ್ಲಯ್ನಾ ಉದೇಶಿಮಠ ಶಾಸ್ತ್ರೀ ಪೂಜೆ ನೆರವೇರಿಸಿದರು. ಫಡಿಬಸವೇಶ್ವರ ದೇವಸ್ಥಾನದಿಂದ ಗ್ರಾಮದೇವಿ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಮಹಿಳೆಯರು ಹಾಗೂ ಗುರು ಹಿರಿಯರು ದೇವಿಗೆ ಉಡಿ ತುಂಬಿ ದೇವಿ ದರ್ಶನ ಪಡೆದುಕೊಂಡರು. ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮೃಣಾಲ್‌ ಹೆಬ್ಟಾಳಕರ್‌. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಸಿ ಪಾಟೀಲ, ತಾಪಂ ಮಾಜಿ ಸದಸ್ಯ ಬಿ.ಎನ್‌. ಪಾಟೀಲ, ಸುರೇಶ ಇಟಗಿ, ಪ್ರಕಾಶ ಜಪ್ತಿ, ಉಳವಪ್ಪ ರೊಟ್ಟಿ, ಆನಂದ ಪಾಟೀಲ, ಶಿವಪ್ಪ ತೋಟಗಿ, ಅಡಿವೇಶ ಇಟಗಿ, ಮಹಾತೇಂಶ ಹಂಚಿನಮನಿ, ಸದ್ದಾಂ ನದಾಫ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next