Advertisement

ಹೆಬ್ಟಾಳ್ಕರ್‌ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿಎಸ್‌ವೈ

07:00 AM Oct 01, 2018 | Team Udayavani |

ಶಿವಮೊಗ್ಗ: “ಕೆಲವರು ಆಡೋ ಹಗುರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ‘ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ಗೆ ತಿರುಗೇಟು ನೀಡಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಹಣ ಹಾಗೂ ಸಚಿವ ಸ್ಥಾನದ ಆಫರ್‌ ನೀಡಲಾಗಿತ್ತು ಎಂಬುದೆಲ್ಲ ಸುಳ್ಳು. ಇವರ ಹಗುರ ಮಾತಿಗೆ ಕಿಮ್ಮತ್ತಿಲ್ಲ ಎಂದರು. ಲಕ್ಷ್ಮೀ ಹೆಬ್ಟಾಳ್ಕರ್‌ ಅವರಿಗೆ ಗೌರವದಿಂದ ಒಂದು ಮಾತು ಹೇಳುತ್ತೇನೆ. ನಿಮ್ಮನ್ನು ಯಾರು ಕೇಳಿದರು? ಯಾರು ಹಣ ಕೊಡ್ತೀವಿ ಅಂದ್ರು ಎಂಬುದನ್ನೆಲ್ಲ ಬಹಿರಂಗ ಪಡಿಸಿ. ಅಲ್ಲದೆ ಈ ವಿಷಯವಾಗಿ ಇಷ್ಟು ದಿನ ಯಾಕೆ ಸುಮ್ಮನಿದ್ರಿ ಎಂದು ಪ್ರಶ್ನೆಗೂ ಉತ್ತರ ಕೊಡಿ ಎಂದರು.

ಸತ್ಯ ರಾಜ್ಯದ ಜನರಿಗೆ ತಿಳಿಯಲಿ. ಲಕ್ಷ್ಮೀ ಹೆಬ್ಟಾಳ್ಕರ್‌  ವಿನಾಕಾರಣ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡದೆ ಶೀಘ್ರವೇ ಎಲ್ಲ ವಿಷಯ ಬಹಿರಂಗಪಡಿಸಲಿ. ಅದು ಬಿಟ್ಟು ಕೇವಲ ಆರೋಪ ಮಾಡುವುದೇ ಕಾಂಗ್ರೆಸ್‌ ನಾಯಕರ ಉದ್ದೇಶವಾಗಿದ್ದರೆ ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next