Advertisement

ಕಂಬದಕೋಣೆ: ಸುಂಟರಗಾಳಿಗೆ ಮನೆ, ಕೊಟ್ಟಿಗೆಗೆ ಹಾನಿ

04:56 PM Aug 04, 2019 | Team Udayavani |

ಉಪ್ಪುಂದ: ಕಂಬದಕೋಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಂಟರ ಗಾಳಿ ಬೀಸಿ ತೆಂಕಬೆಟ್ಟು ಕಡೆಮನೆ ಅಣ್ಣಪ್ಪ ಬಳೆಗಾರ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

Advertisement

ರಾತ್ರಿ ಹೊತ್ತು ದಿಢೀರನೆ ಬೀಸಿದ ಸುಂಟರಗಾಳಿಯಿಂದಾಗಿ ಮರ ಬಿದ್ದಿದ್ದು, ಈ ವೇಳೆ ಮನೆಯ ಗೋಡೆ ಬಿರುಕು ಬಿಟ್ಟಿದೆ. ಮನೆಯ ಮೇಲ್ಛಾವಣಿಗೂ ಹಾನಿಯಾಗಿದೆ.

ಕೊಟ್ಟಿಗೆಗೆ ಹಾನಿ
ಸುಂಟರಗಾಳಿಯ ಆರ್ಭಟಕ್ಕೆ ಹಸುಗಳ ಕೊಟ್ಟಿಗೆಯೂ ಕುಸಿದಿದೆ. ಆರ್ಥಿಕವಾಗಿ ತೀರಾ ಹಿಂದುಳಿದ ಈ ಕುಟುಂಬದ ಮನೆ ಹಾಗೂ ಕೊಟ್ಟಿಗೆಗೆ ಹಾನಿಗೀಡಾದ್ದರಿಂದ ಜಿಲ್ಲಾಡಳಿತ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next