Advertisement

ಭಾರೀ ಮಳೆ : ತುಂಬಿ ಹರಿಯುವ ಹಳ್ಳದ ನಡುವೆ ಸಿಲುಕಿದ ಕಾರ್ಮಿಕರು

11:17 AM Oct 21, 2019 | Suhan S |

ಹುಬ್ಬಳ್ಳಿ: ಭಾರೀ ಮಳೆಯ ಪರಿಣಾಮ ತಾಲೂಕಿನ ಇಂಗಳಹಳ್ಳಿ ಹಾಗೂ ಶಿಶುವಿನಹಳ್ಳಿ ನಡುವಿನ ಸೇತುವೆ ಕಾಮಗಾರಿ ನಿರ್ವಹಿಸುತ್ತಿದ್ದ 9 ಜನ ಕಾರ್ಮಿಕರು ಯರನಹಳ್ಳದ ಮಧ್ಯ ಸಿಲುಕಿ ಕೊಂಡಿದ್ದಾರೆ.

Advertisement

ರವಿವಾರ ಸಂಜೆಯಿಂದ ಸುರಿದ ಮಳೆಯಿಂದಾಗ ಯರನಹಳ್ಳ ಹುಕ್ಕಿ ಹರಿಯುತ್ತಿದ್ದು, ಇದೇ ಹಳ್ಳದ ಸೇತುವೆ ಕಾಮಗಾರಿಗೆ ಆಗಮಿಸಿದ ಕಾರ್ಮಿಕರು ಹಳ್ಳದ ದಂಡೆಯ ಮೇಲೆ‌ ತಾತ್ಕಲಿಕ‌ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದರು. ನಿನ್ನೆ ರಾತ್ರಿಯಿಡಿ ಸುರಿದ‌ ಮಳೆಯಿಂದ ಹಳ್ಳ‌ಡ್ಡಿನ ಸುತ್ತಲೂ ಜಲವೃತವಾಗಿರುವುದರಿಂದ ಅಲ್ಲಿಂದ ಬರಲು‌ ಸಾಧ್ಯವಾಗಿಲ್ಲ. ಹೀಗಾಗಿ 9 ಕಾರ್ಮಿಕರು ಹಳ್ಳದ ನಡುವೆ ಸಿಲುಕಿಕೊಂಡಿದ್ದಾರೆ. ಎರಡು ಶೆಡ್ಡಗಳ ನಡುವೆ ಖಾಲಿ ಇರುವ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ದೌಡು: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಸಿ ನೇತ್ರತ್ವದಲ್ಲಿ ಅಧಿಕಾರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next