Advertisement

ಶನಿವಾರಸಂತೆ ಭಾರೀ ಮಳೆಗಾಳಿಗೆ ಮನೆ ಹೆಂಚು ಹಾರಿಹೋಗಿ ನಷ್ಟ

11:54 PM Apr 10, 2019 | sudhir |

ಶನಿವಾರಸಂತೆ :ಸೋಮವಾರ ರಾತ್ರಿ ಶನಿವಾರಸಂತೆ ವ್ಯಾಪ್ತಿಯಲ್ಲಿ ಸುರಿದ ಗುಡುಗು. ಸಿಡಿಲು ಬಾರಿ ಮಳೆಗಾಳಿಗೆ ಅನೇಕ ಜನರ ವಾಸದ ಮನೆಯ ಶೀಟ್‌, ಹೆಂಚುಗಳು ಹಾರಿಹೋಗಿದ್ದು ಅಪಾರ ಪ್ರಮಾಣದಲ್ಲಿ ನಷ್ಟಗೊಂಡಿದೆ.
ತೆಂಗಿನಮರ ಬಾಳೆಗಿಡಗಳು ಗಾಳಿಗೆ ಮುರಿದು ಬಿದ್ದಿವೆೆ. ಅಪ್ಪಶೆಟ್ಟಳ್ಳಿ ಗ್ರಾಮದ ಕೊಮರಪ್ಪ ಎಂಬುವರ ವಾಸದ ಮನೆ ಮಾಡಿನ ಹೆಂಚು ಗಾಳಿ ಮಳೆಗೆ ಸಂಪೂರ್ಣವಾಗಿ ಹಾರಿಹೋಗಿದೆ.

Advertisement

ಈ ಸಂದರ್ಭದಲ್ಲಿ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲವಾರು ಜನರ ತೋಟದಲ್ಲಿ ಗಾಳಿಗೆ ತೆಂಗಿನ ಮರ, ಅಡಿಕೆಮರ ಹಾಗೂ ಬಾಳೆಗಿಡಗಳು ಧರೆಗುರುಳಿವೆೆ. ಅನೇಕ ಕಡೆಗಳಲ್ಲಿ ಇದೇ ರೀತಿ ಹಾನಿ ಸಂಭವಿಸಿ ಬಹಳಷ್ಟು ನಷ್ಟ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next