Advertisement

ಮನೆಗಳು ನೀರು ಪಾಲು: ಜನರ ಕಣ್ಣೀರು

01:25 PM Aug 11, 2019 | Team Udayavani |

ಅಂಕೋಲಾ: ತಾಲೂಕಿನಲ್ಲಿ ಗಂಗಾವಳಿ ನದಿ ಪ್ರವಾಹವೂ ಇಳಿಮುಖವಾಗುತ್ತಿದೆ. ತಮ್ಮ ಮನೆ ಮಠವನ್ನು ಕಳೆದುಕೊಂಡ ಜನರ ಸ್ಥಿತಿ ಚಿಂತಾಜನಕ. ಕೆರೆಗಳಂತಾದ ಹೊಲ ಗದ್ದೆಗಳು, ನೀರಿನಲ್ಲಿ ಮುಳುಗಿದ ಮನೆಗಳು, ಎಲ್ಲವನ್ನೂ ನೆನೆದರೆ ಎದೆ ಒಂದು ಕ್ಷಣ ಝಲ್ ಎನಿಸುತ್ತದೆ.

Advertisement

ಹೌದು ಗಂಗಾವಳಿ ನದಿ ಹಿಂದೆಂದು ಕಂಡರೀಯದ ರೌದ್ರಾವತಾರಕ್ಕೆ ಅಂಕೋಲಾ ತಾಲೂಕಿನ ಭಾಗಶಃ ನಲುಗಿ ಹೋಗಿದೆ. ಕಳೆದ ಆರು ದಿನಗಳಿಂದ ಸಂಭವಿಸಿದ ಪ್ರವಾಹದಿಂದ ಎಲ್ಲೆಡೆ ತುಂಬಿಕೊಂಡಿರುವ ನೀರು ನಿಧಾನಗತಿಯಲ್ಲಿ ಸಾಗರದೊಡಲಿಗೆ ಸೇರುತ್ತಿದೆ. ಇತ್ತ ಮನೆ ತೊರೆದು ಬಂದ ಜನ ಮನೆಯತ್ತ ಮುಖ ಮಾಡಿ ಹೊರಟರೆ ಕೆಲವೆಡೆ ಮನೆಯ ಅವಶೇಷ ಮಾತ್ರ ಕಂಡು ಜನ ಕಣ್ಣೀರಿಡುತ್ತಿದ್ದಾರೆ.

ನೋಡ ನೋಡುತ್ತಿದ್ದಂತೆ ಬದುಕು ಬಾಳಿದ ಮನೆಗಳು ಕುಸಿಯಲಾರಂಭಿಸಿದೆ. ಗೋಡೆಯು ಬಿರುಕು ಬಿಡುತ್ತಿವೆ. ಮನೆಗೆ ಹೊಗಲು ಇದ್ದ ದಾರಿ ಮಾಯವಾಗಿದೆ. ಕೆಲವಡೆ ಭೂಕುಸಿತ. ಇಂತಹ ದಯನೀಯ ಘಟನೆಗಳು ನೆರೆ ಬಂದು ಹೊದ ಮೇಲೆ ಆಗುತ್ತಿದೆ. ನೆರೆ ಇಳಿಯಿತು ಎಂದು ಜನ ಮನೆಗೆ ಹೊರಟರೆ ಮನೆಯೊಳಗೆ ಕಾಲಿರಿಸಲಾಗದಷ್ಟು ಕೊಳಚೆ ಮಣ್ಣು. ಮನೆಯೊಳಗಿದ್ದ ದಿನ ಬಳಕೆ ವಸ್ತು, ಆಹಾರ ಧಾನ್ಯ ಟಿವಿ. ಪ್ರೀಜ್‌ ಎಲ್ಲವು ಉಪಯೋಗಕ್ಕೆ ಬಾರದಾಗಿದೆ. ದನ ಕರುಗಳು, ನಾಯಿಗಳು, ಕೋಳಿಗಳು ಪ್ರಾಣ ಕಳೆದು ಕೊಂಡಿವೆ. ಜನರ ಬದುಕು ಹತೋಟಿಗೆ ಬರಲು ಸರಕಾರ ಮತ್ತು ಸಂಘ ಸಂಸ್ಥೆಗಳು ಕೈ ಜೊಡಿಸಬೇಕಿದೆ.

ನೆರೆ ಪ್ರದೇಶದಲ್ಲಿ ಚಿಕಿತ್ಸೆ: ಆರೋಗ್ಯ ಇಲಾಖೆಯಿಂದ ಪ್ರತಿಯೊಂದು ನೆರೆ ಪ್ರದೇಶದಲ್ಲಿ ಪ್ರತಿಯೊಬ್ಬರ ಆರೋಗ್ಯ ಚಿಕಿತ್ಸೆ ಮಾಡಲಾಗುತ್ತಿದೆ. ನೆರೆಯಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳ ಕುರಿತು ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ, ತಾಲೂಕಿನ ಸಂಘ ಸಂಸ್ಥೆಗಳು ಪ್ರತಿಯೊಂದು ನೆರೆ ಪೀಡಿತ ಪ್ರದೇಶದಲ್ಲಿ ಔಷಧಗಳನ್ನು ಪೂರೈಸುತ್ತಿದೆ.
ನೆರೆ ಭೀತಿ: ಕರಾವಳಿ ತೀರದಲ್ಲಿ ಮಳೆ ಕಡಿಮೆ ಆಗಿದೆ. ಮಲೆನಾಡು ಭಾಗವಾದ ಯಲ್ಲಾಪುರ ಮುಂಡಗೋಡ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದರೆ ಮತ್ತೆ ಗಂಗಾವಳಿ ನೆರೆ ಭೀತಿ ಎದುರಾಗುತ್ತದೆ. ಮಲೆನಾಡಿನಲ್ಲಿ ಮಳೆಯು ಆಗಾಗ ಸುರಿಯುತ್ತಿದ್ದು ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡಿರುವ ಜನರಲ್ಲಿ ನೆರೆ ಭೀತಿಲ್ಲಿಯೆ ನಿದ್ದೆಗೆಟ್ಟು ಕಾಲ ಕಳೆಯುವಂತಾಗಿದೆ. ತಾಲೂಕಾಡಳಿತ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂದಿನ ಎರಡು ದಿನವು ನೆರೆಯ ಮುನ್ನೆಚ್ಚರಿಕೆ ನೀಡಿದ್ದಾರೆ.

 

•ಅರುಣ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next