Advertisement

ಕುಸಿದ ಕೊಟ್ಟಿಗೆ : ಮಣ್ಣಿನಡಿ ಸಿಲುಕಿದ್ದ ಎತ್ತು, ಹೋರಿ ಕರುಗಳನ್ನು ರಕ್ಷಿಸಿದ ಗ್ರಾಮಸ್ಥರು

12:45 PM Oct 21, 2020 | sudhir |

ಯಲಬುರ್ಗಾ : ನಿರಂತರ ಮಳೆಯಿಂದ ತಾಲೂಕಿನ ಕರಮುಡಿ ಗ್ರಾಮದ ವೀರಪ್ಪ ಮಂಡಲಗೇರಿ ಎಂಬುವವರ ಮನೆಯ ದನದ ಕೊಟ್ಟಿಗೆಯ ಛಾವಣಿ ಸಂಪೂರ್ಣ ಕುಸಿದಿದ್ದರಿಂದ ಕೊಟ್ಟಿಗೆಯಲ್ಲಿದ್ದ ಒಂದು ಎತ್ತು, ಎರಡು ಹೋರಿ ಕರುಗಳು ಮಣ್ಣಿನಡಿ ಸಿಲುಕಿದ್ದವು.

Advertisement

ಬೆಲೆಬಾಳುವ ಜಾನುವಾರುಗಳು ಮಣ್ಣಿನಡಿ ಸಿಲುಕಿದ್ದವು. ಗ್ರಾಮದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮಣ್ಣಿನಡಿ ಸಿಲುಕಿದ್ದ ಜಾನುವಾರುಗಳನ್ನು ಹೊರ ತೆಗೆದು ಅವುಗಳ ಪ್ರಾಣ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಜಾನುವಾರು ಮಾಲೀಕನ ಜತೆಗೆ ಗ್ರಾಮದ ಗ್ರಾಮಸ್ಥರು ಕೂಡಿ ಜಾನುವಾರುಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಯಿತು.

ಪರಿಹಾರಕ್ಕೆ ಆಗ್ರಹ : ಮನೆ ಕುಸಿತದಿಂದ ಅಪಾರ ವಸ್ತುಗಳು ಹಾನಿಯಾಗಿದ್ದು ಕುಟುಂಬಕ್ಕೆ ತಾಲೂಕಾಡಳಿತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

Advertisement
Advertisement

Udayavani is now on Telegram. Click here to join our channel and stay updated with the latest news.

Next