Advertisement

ಗುಡುಗು ಸಹಿತ ಭಾರಿ ಮಳೆ : ಚರ್ಚ್ ಗೋಪುರಕ್ಕೆ ಹಾನಿ

11:57 AM May 08, 2021 | Team Udayavani |

ಉಳ್ಳಾಲ : ನಿನ್ನೆ ತಡರಾತ್ರಿ ಸುರಿದ ಮಳೆಯೊಂದಿಗೆ ಸಿಡಿಲು ಬಡಿದು ಪಜೀರು ಗ್ರಾಮದ ಹಳೆ ಚರ್ಚ್ ನ ಮುಖ್ಯ ಗೋಪುರಕ್ಕೆ ಹಾನಿಯಾದ ಘಟನೆ ನಡೆದಿದೆ.

Advertisement

ಪಜೀರು ಮರ್ಸಿಯಮ್ಮನವರ ಹಳೇ ಚರ್ಚಿಗೆ ಸಿಡಿಲು ಬಡಿದು ಹಾನಿಯಾಗಿದ್ದು, ಸಿಡಿಲಿನ ಅಬ್ಬರಕ್ಕೆ ಗೋಪುರದ ಮೇಲಿದ್ದ ಶಿಲುಬೆ ಸಹಿತ ಗೋಡೆ ಕುಸಿದ ಪರಿಣಾಮ ಚರ್ಚ್ ನ ಹೆಂಚುಗಳು ಕೆಳಗೆ ಬಿದ್ದು ಹಾನಿಯಾಗಿದೆ.

ನೂತನ ಚರ್ಚ್ ನಿರ್ಮಾಣದ ಬಳಿಕ ಈ ಚರ್ಚ್ ನಲ್ಲಿ ವಾರದ ಪೂಜೆ ಸಾಂಕೇತಿಕವಾಗಿ ನಡೆಯುತ್ತಿದ್ದು, ಮರಣ ಸಂಬಂಧಿ ಪೂಜೆಯನ್ನು ಇಲ್ಲಿ ನಡೆಸಲಾಗುತ್ತಿದೆ. ಚರ್ಚ್ ಧರ್ಮಗುರು ಸಹಿತ ಸಿಬಂದಿಗಳು ಈ ಚರ್ಚ್ ನಲ್ಲಿ  ಇರದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ ಘಟನಾ ಸ್ಥಳಕ್ಕೆ ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೇರಿ ಡಿ. ಸೋಜಾ, ಮಾಜಿ ಅಧ್ಯಕ್ಷ ಇಮ್ತಿಯಾಝ, ಫ್ಲೋರಿನ್, ಧರ್ಮಗುರು ಸುನಿಲ್ ವೇಗಸ್, ಚರ್ಚ್ ಪಾಲನಾ ಸಮಿತಿಯ ವಿಕ್ಟರ್ ಡಿ.ಸೋಜ, ರಿಚ್ಚಾರ್ಡ್ ಗ್ರಾಮಚಾವಡಿ, ಜಾನ್ ಮೆಂಡೋನ್ಸಾ, ಪಾವೂರು ಗ್ರಾಮ ಪಂಚಾಯತ್ ಸದಸ್ಯ ವಲೇರಿಯನ್ ಭೇಟಿ‌ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next