Advertisement

ದಾಖಲೆ ಮಳೆ;ಮಂಡ್ಯ ರೈತರಲ್ಲಿ ಹರ್ಷ,ಮೈಸೂರಿನಲ್ಲಿ ವ್ಯಕ್ತಿ ಬಲಿ 

12:14 PM Aug 15, 2017 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ,ಮೈಸೂರು,ಶಿವಮೊಗ್ಗ ಮತ್ತು ಚಾಮರಾಜನಗರ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಸೋಮವಾರ ರಾತ್ರಿಯಿಂದ ದಾಖಲೆಯ ಭಾರೀ ಮಳೆ ಸುರಿದಿದೆ.

Advertisement

ಲಕ್ಷ ದ್ವೀಪದಲ್ಲಿ  ವಾಯುಭಾರ ಕುಸಿತದಿಂದಾಗಿ ಮಳೆಯಾಗಿದ್ದು, ಬೆಂಗಳೂರಿನಲ್ಲಿ ದಾಖಲೆಯ 14  ಸೆ.ಮೀ. ಮಳೆ ಸುರಿದಿದ್ದು, ಹಲವು ಅವಾಂತರಗಳು ಸಂಭವಿಸಿದೆ.ಇಂದೂ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದ್ದು ತಗ್ಗು ಪ್ರದೇಶಗಳಲ್ಲಿರುವ ಜನತೆ ಇನ್ನಷ್ಟು ಕಂಗಾಲಾಗಿದ್ದಾರೆ. 

ನಗರದ  ಹಲವೆಡೆ ಮರಗಳು ಧರೆಗುರುಳಿದ್ದು, ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡಬೇಕಾಗಿದೆ. ನೂರಾರು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಮಂಡ್ಯದಲ್ಲಿ 11 ಸೆ.ಮೀ ಮಳೆಯಾಗಿದ್ದು  ಉತ್ತಮ ಮಳೆ ನಿರೀಕ್ಷಿಸುತ್ತಿದ್ದ ರೈತರಲ್ಲಿ ಹರ್ಷ ತಂದಿದೆ. ಶಿವಮೊಗ್ಗದಲ್ಲಿ 10 ಸೆ.ಮೀ, ತುಮಕೂರಿನಲ್ಲಿ 8 ಸೆ.ಮೀ ಮಳೆ ಸುರಿದಿರುವ ಬಗ್ಗೆ ಹವಮಾನ ಇಲಾಖೆ ವರದಿ ನೀಡಿದೆ.

ಮೈಸೂರಿನಲ್ಲಿ ವ್ಯಕ್ತಿ ಬಲಿ 

Advertisement

ಮೈಸೂರಿನಲ್ಲಿ ಸುರಿದ ಭರ್ಜರಿ ಮಳೆಗೆ  ಗಾಂಧಿನಗರದ ಲಿಡ್ಕರ್ ಕಾಲೋನಿಯಲ್ಲಿ ಗೋಡೆ ಕುಸಿದು ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. 40 ವರ್ಷದ ಮಗ್ಗಿ ಮೃತ ದುರ್ದೈವಿ. ಎನ್.ಆರ್ ಠಾಣೆಯ  ಪೊಲೀಸರು ಸ್ಥಳಕ್ಕೆ ದೌಡಾಯಿಸಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next