Advertisement

ಗಾಳಿ-ಮಳೆಗೆ ಕೊಚ್ಚಿ ಹೋದ ಒಣಗಲು ಹಾಕಿದ್ದ ಭತ್ತ

07:55 PM Apr 30, 2021 | Team Udayavani |

ಕಾರಟಗಿ: ಪಟ್ಟಣದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ಒಣಗಿಸಲು ಹಾಕಿದ ಭತ್ತದ ರಾಶಿ ಮಳೆ ನೀರಿಗೆ ತೇಲಿ ಹೋಗಿವೆ.

Advertisement

ಪಟ್ಟಣದಲ್ಲಿ ಗುರುವಾರ ಸಂಜೆ ಕೆಲಕಾಲ ಮಳೆ ಸುರಿಯಿತು. ಹೊರವಲಯದಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಎಪಿಎಂಸಿ ಯಾರ್ಡ್‌ನಲ್ಲಿ ಒಣಗಿಸಲು ಹಾಕಿದ ಭತ್ತದ ರಾಶಿಗಳು ಮಳೆ ನೀರಿಗೆ ತೇಲಿ ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಆಲಿಕಲ್ಲು ಮಳೆಯಿಂದಾಗಿ ಕಟಾವು ಮಾಡದ ಭತ್ತದ ಬೆಳೆ ನೆಲಕಚ್ಚಿದೆ. ಏಕಾಏಕಿ ಸುರಿದ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.

ಭತ್ತದ ನಾಟಿಯಿಂದ ಹಿಡಿದು ಕಟಾವುವರೆಗೂ ಎಕರೆಗೆ 30 ಸಾವಿರಕ್ಕೂ ಹೆಚ್ಚು ಹಣ ವ್ಯಯಿಸಿಬೇಕು. ಇನ್ನೇನು ಭತ್ತ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಇಂತಹ ಆಪತ್ತು ಬಂದೆರಗಿದೆ. ಭತ್ತ ಒಣಗಿಸಲು ಹಾಕಿದ ರೈತರ ಸಂಕಷ್ಟ ಹೇಳತೀರದು. ಭತ್ತದ ರಾಶಿ ಕಣ್ಣೆದುರಿಗೆ ನೀರುಪಾಲಾಗುವುದನ್ನು ಕಂಡು ರೈತರು ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next