Advertisement

Heavy Rain: ಕಾಫಿನಾಡಲ್ಲಿ ಭಾರಿ ಮಳೆ… ಹಳ್ಳ ದಾಟಲು ಹೋಗಿ ಕಣ್ಣೆದುರೇ ನೀರು ಪಾಲಾದ ಎಮ್ಮೆ

02:37 PM Jul 20, 2024 | Team Udayavani |

ಚಿಕ್ಕಮಗಳೂರು: ಕಾಫಿನಾಡಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದೆ ಈ ನಡುವೆ ಎಮ್ಮೆಯೊಂದು ಹಳ್ಳ ದಾಟಲು ಹೋಗಿ ವ್ಯಕ್ತಿಯೊಬ್ಬರ ಕಣ್ಣೆದುರೇ ನಿರುಪಾಲಾಗಿರುವ ಘಟನೆ ಕಳಸ ತಾಲೂಕಿನ ಮಾವಿನಹೊಲದಲ್ಲಿ ಶನಿವಾರ ನಡೆದಿದೆ.

Advertisement

ಕಳಸ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ ಈ ನಡುವೆ ಇಲ್ಲೋರ್ವ ವ್ಯಕ್ತಿ ತನ್ನ ಮೊಬೈಲ್ ನಿಂದ ಉಕ್ಕಿ ಹರಿಯುತ್ತಿರುವ ನದಿಯ ವಿಡಿಯೋ ಮಾಡುತ್ತಿರುವ ವೇಳೆ ಎಮ್ಮೆಯೊಂದು ಹಳ್ಳ ದಾಟಲು ಯತ್ನಿಸಿದೆ ಈ ವೇಳೆ ಅಲ್ಲಿದ್ದ ವ್ಯತಿ ಎಮ್ಮೆಯನ್ನು ಹಳ್ಳ ದಾಟದಂತೆ ತಡೆಯಲು ಯತ್ನಿಸಬಹುದಿತ್ತು ಆದರೆ ಆತ ವಿಡಿಯೋ ಮಾಡುವುದರಲ್ಲೇ ಬ್ಯುಸಿಯಾಗಿದ್ದ ಅತ್ತ ಎಮ್ಮೆ ಹಳ್ಳ ದಾಟಲು ಹೋಗಿ ನೀರಿನ ರಭಸಕ್ಕೆ ವ್ಯಕ್ತಿಯ ಕಣ್ಣೆದುರೇ ನೀರುಪಾಲಾಗಿದೆ, ಈ ದೃಶ್ಯ ಆತನ ಮೊಬೈಲ್ ನಲ್ಲಿ ಸೆರೆಯಾಗಿದೆ.

ಒಂದು ವೇಳೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಸಮಯ ಪ್ರಜ್ಞೆ ಮೆರೆಯುತ್ತಿದ್ದರೆ ಎಮ್ಮೆಯ ಜೀವ ಉಳಿಯುತ್ತಿತ್ತು.

ಇದನ್ನೂ ಓದಿ: Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next