Advertisement

ಭಾರಿ‌ ಮಳೆ: ಧಾರವಾಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

10:52 PM Jul 26, 2023 | Team Udayavani |

ಧಾರವಾಡ :ಜಿಲ್ಲೆಯಾದ್ಯಂತ ನಿರಂತರ ಮಳೆಯ ಹಿನ್ನೆಲೆಯಲ್ಲಿ ಜು.27 ರಂದು ಜಿಲ್ಲೆಯ ಎಲ್ಲ ಅಂಗನವಾಡಿ,ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ರಜೆ ಘೋಷಿಸಿದ್ದಾರೆ.

Advertisement

ಮಳೆಯ ಹಿನ್ನಲೆಯಲ್ಲಿ ಕಳೆದ ಸೋಮವಾರ ( ಜು.24 ರಂದು) ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು.‌ ಇದೀಗ ಮಳೆ ಸತತವಾಗಿ ಸುರಿಯುತ್ತಿರುವ ಹಿನ್ನಲೆಯಲ್ಲಿ ಗುರುವಾರ ದಂದು ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಿಸಲಾಗಿದೆ.

ಕಳೆದ ಒಂದು ವಾರದಲ್ಲಿ ಜು.20 ರಿಂದ ಜು.26 ರವರೆಗಿನ ಅವಧಿಯ ಧಾರವಾಡ ಜಿಲ್ಲೆಯ 32 ಮಿ.ಮೀ ವಾಡಿಕೆ ಮಳೆಯ ಪೈಕಿ 174 ಮೀ.ಮೀಯಷ್ಟು ಮಳೆಯಾಗಿದೆ‌. ಇದರಿಂದ ಶೇ.373 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಒಂದೇ ವಾರದಲ್ಲಿ ಮಳೆ ಸುರಿದಿದ್ದು, ಮಳೆಯು ಅಬ್ಬರ ಮುಂದುವರೆದಿದೆ. ಮಳೆಯು ಇನ್ನೂ ಸುರಿಯುವ ಮುನ್ಸೂಚನೆ ಹಿನ್ನಲೆಯಲ್ಲಿ ಇದೀಗ ಜಿಲ್ಲಾಡಳಿತ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿದೆ‌.

 

Advertisement

Udayavani is now on Telegram. Click here to join our channel and stay updated with the latest news.

Next