Advertisement

ನಿರಂತರ ಮಳೆ: ಕೃಷಿ ಭೂಮಿಗಳು ಜಲಾವೃತ, ತುಂಗಭದ್ರಾ ಜಲಾಶಯದಲ್ಲಿ49 ಟಿಎಂಸಿ‌ ನೀರು ಸಂಗ್ರಹ

11:38 AM Jul 27, 2023 | Team Udayavani |

ಹೊಸಪೇಟೆ: ನಿರಂತರ ಮಳೆಗೆ ಐತಿಹಾಸಿಕ ಜಂಬುನಾಥನಹಳ್ಳಿಯ ರಾಯರ ಕೆರೆ ಪ್ರದೇಶದ ಕೃಷಿ ಭೂಮಿಗಳು ಜಲಾವೃತವಾಗಿದ್ದು, ನೂರಾರು ಎಕರೆಯಲ್ಲಿ ಬೆಳೆದ ಕಬ್ಬಿನ ಬೆಳೆಗೆ ಹಾನಿ ಸಂಭವಿಸಿದ ಘಟನೆ ಜು. 27ರ ಗುರುವಾರ ನಡೆದಿದೆ.

Advertisement

ಭಾರೀ ಮಳೆ ಬಂದಾಗ ಮಳೆನೀರು ಬೆಳೆಗಳಿಗೆ ನುಗ್ಗುವುದು ವಾಡಿಕೆಯಾಗಿದೆ. ಇದರಿಂದಾಗಿ ಈ ಭಾಗದ ರೈತರು ಸಂಕಷ್ಟಕ್ಕೀಡಾಗುತ್ತಾರೆ.

ತುಂಗಭದ್ರಾ ಜಲಾಶಯದಲ್ಲಿ ಒಂದೇ ದಿನದಲ್ಲಿ 9 ಟಿಎಂಸಿಯಷ್ಟು ನೀರು ಹರಿದು ಬಂದಿದ್ದು, ಸದ್ಯ ಜಲಾಶಯದಲ್ಲಿ 49 ಟಿಎಂಸಿ‌ ನೀರು ಸಂಗ್ರಹವಿದೆ.

ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣ  1 ಲಕ್ಷ ಕ್ಯೂಸೆಕ್ಸ್ ಗಡಿ ದಾಟಿದೆ. ಸದ್ಯ ಜಲಾಶಯಕ್ಕೆ 1 ಲಕ್ಷ 13 ಸಾವಿರದ 981 ಕ್ಯೂಸೆಕ್ ನೀರು  ಹರಿದು ಬರುತ್ತಿದೆ. ಕಳೆದ 24 ಗಂಟೆಯೊಳಗೆ 1 ಲಕ್ಷದ 15 ಸಾವಿರದ 66 ಕ್ಯೂಸೆಕ್ ನೀರು ಒಳಹರಿವು ಬಂದಿದೆ.

Advertisement

105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 49.760 ಟಿಎಂಸಿ ನೀರು ಸಂಗ್ರಹವಿದೆ.

Advertisement

Udayavani is now on Telegram. Click here to join our channel and stay updated with the latest news.

Next