Advertisement

ಮಳೆ-ತಂಪಿನಿಂದ ತೊಗರಿ ಬೆಳೆಗೆ ಹಾನಿ

10:28 AM Nov 19, 2021 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆ ಮತ್ತು ಮೋಡ ಕವಿದ ತಂಪು ವಾತಾವರಣ, ಮುಸುಕಿನ ಮಂಜಿನಿಂದ ತೊಗರಿ ಹೂವು ಮತ್ತು ಮೊಗ್ಗು ಉದುರಿ ಹೋಗಿ, ಬೆಳೆಗಾರನಿಗೆ ನಷ್ಟವಾಗಿದೆ.

Advertisement

ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ತೊಗರಿ ಬೆಳೆ ಸತತವಾಗಿ ಸುರಿದ ಮಳೆಯಿಂದ ಅನೇಕ ಕಡೆಗಳಲ್ಲಿ ಸಂಪೂರ್ಣ ಹಾನಿಯಾಗಿದೆ. ಅಲ್ಲದೆ ಇನ್ನು ಕೆಲವು ಕಡೆ ಹೊಲಗಳಲ್ಲಿ ನೀರು ನಿಂತು, ತೊಗರಿ ಬೆಳೆ ಬೇರು ಕೊಳೆತಿದೆ. ಮತ್ತೆ ಕೆಲವೆಡೆ ನೆಟೆರೋಗ ಕಾಣಿಸಿಕೊಂಡು ಬೆಳೆ ಹಾಳಾಗಿದೆ.

ತಾಲೂಕಿನ ಸುಲೇಪೇಟ, ಚಿಂಚೋಳಿ, ಕೋಡ್ಲಿ, ಚಿಮ್ಮನಚೋಡ, ಐನಾಪುರ, ಕುಂಚಾವರಂ ಹೋಬಳಿ ಗ್ರಾಮಗಳಲ್ಲಿ ತೊಗರಿ ಬೆಳೆ ಹೂವು ಮತ್ತು ಮೊಗ್ಗಿನಿಂದ ಸಮೃದ್ಧಿಯಾಗಿ ಬೆಳೆದಿದೆ. ಆದರೆ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಹೂವುಗಳಿಂದ ಕಂಗೊಳಿಸುತ್ತಿದ್ದ ತೊಗರಿ ಹೂವು, ಮೊಗ್ಗು, ಚೆಳ್ಳಿಕಾಯಿ ಉದುರಿ ಹೋಗಿದೆ. ಒಟ್ಟು 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೊಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next