Advertisement

ಕಾವೇರಿದ ತಾಪಮಾನದ ಮಧ್ಯೆ ವರುಣ ಕೃಪೆ: ಕುಕ್ಕೆ , ಬೆಳ್ತಂಗಡಿ ಪರಿಸರದಲ್ಲಿ ಉತ್ತಮ ಮಳೆ

01:29 AM Apr 26, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಗಾಳಿ ಸಹಿತ ಉತ್ತಮ ಮಳೆ ಸುರಿ ದಿದ್ದು, ವಾತಾವರಣ ತುಸು ತಂಪಾಗಿದೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡದಿಂದ ಕೂಡಿದ ವಾತಾ ವರಣ ಇತ್ತು. ಮಧ್ಯಾಹ್ನ ವೇಳೆಗೆ ವಿವಿಧ ಕಡೆ ಗಳಲ್ಲಿ ಮಳೆ ಸುರಿಯಲಾರಂಭಿಸಿದೆ.
ಮಂಗಳೂರು ನಗರದಲ್ಲಿ ದಿನ ವಿಡೀ ಬಿಸಿಲು ಮತ್ತು ಮೋಡ ದಿಂದ ಕೂಡಿದ ವಾತಾವರಣ ಇತ್ತು.
ಮಂಗಳೂರಿನಲ್ಲಿ 34 ಡಿ.ಸೆ. ಗರಿಷ್ಠ ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

Advertisement

ಒಂದು ಗಂಟೆ ರಸ್ತೆ ಬ್ಲಾಕ್‌
ಗುಂಡ್ಯ ಪ್ರದೇಶದಲ್ಲಿ ಭಾರೀ ಗಾಳಿ ಮಳೆ ಸುರಿದಿದೆ. ಗಾಳಿಗೆ ಮರಗಳು ರಸ್ತೆಗುರುಳಿದ್ದು, ಮಂಗಳೂರು- ಬೆಂಗಳೂರು ನಡುವಣ ವಾಹನ ಸಂಚಾರ ಒಂದು ಗಂಟೆ ಬ್ಲಾಕ್‌ ಆಗಿತ್ತು. ಈ ಭಾಗದಲ್ಲಿ ವಿದ್ಯುತ್‌ ಕಂಬ ಧರೆ ಗುರುಳಿದ್ದು, ಕೆಲವು ಅಂಗಡಿ ಗಳಿಗೆ ಹಾನಿಯಾಗಿದೆ. ಮನೆ ಹೆಂಚು ಹಾರಿ ಹೋಗಿದೆ.

ಎರಡು ದಿನ “ಎಲ್ಲೋ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಎ. 29 ಮತ್ತು 29ರಂದು ಕರಾವಳಿ ಭಾಗ ದಲ್ಲಿ “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಹಲವು ಕಡೆಗಳಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಉತ್ತಮ ಮಳೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಂಗಳವಾರ ಸುಮಾರು ಒಂದು ಗಂಟೆ ಕಾಲ ಗಾಳಿ, ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲಮೊಗ್ರು ಕಲ್ಮಕಾರು, ಹರಿಹರ ಪಳ್ಳತ್ತಡ್ಕ, ಐನೆಕಿದು, ಗುತ್ತಿಗಾರು, ಬಳ್ಪ, ಯೇನೆಕಲ್ಲು, ಕೈಕಂಬ, ಪಂಜ ಸೇರಿದಂತೆ ಕೆಲವೆಡೆ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಕೇವಲ 5 ನಿಮಿಷದ ಹನಿ ಮಳೆಯಾಗಿದ್ದು, ಬಳಿಕ ಮೋಡ ಕವಿದ ವಾತಾವರಣ ಕಂಡುಬಂದಿದೆ.

ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ವಾಹನಗಳ ಓಡಾಟಕ್ಕೆ ಸಮಸ್ಯೆಯಾಯಿತು. ಮಲಿನಗೊಂಡಿದ್ದ ದರ್ಪಣ ತೀರ್ಥದಲ್ಲಿ ನೀರು ಹರಿದಿದ್ದು, ಒಮ್ಮೆಗೆ ನಿರಾಳವಾಗಿದೆ.

ಸೇತುವೆ ಮೇಲೆ ನಿಂತ ನೀರು
ಸುಬ್ರಹ್ಮಣ್ಯದ ಕನ್ನಡಿ ಹೊಳೆ ಸೇತುವೆಯ ಮೇಲೆ ಪೂರ್ತಿ ನೀರು ತುಂಬಿ ನಿಂತು ವಾಹನಗಳಿಗೆ ಸಂಚರಿಸಲು ಕಷ್ಟವಾಗಿತ್ತು. ಸುಬ್ರಹ್ಮಣ್ಯದ ಸಮಾಜಸೇವಕ ಡಾ| ರವಿ ಕಕ್ಕೆಬಾದ ಅವರು ಸಹೋದ್ಯೋಗಿಗಳೊಂದಿಗೆ ಸೇರಿ ಕೊಂಡು ನೀರು ಸ್ವಲ್ಪ ಮಟ್ಟಿಗೆ ಹರಿದುಹೋಗುವಂತೆ ಮಾಡಿದರು.

ಬೆಳ್ತಂಗಡಿ
ಬೆಳ್ತಂಗಡಿ: ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜಿಲ್ಲೆಯ ಜನರಿಗೆ ವರುಣ ಕೃಪೆ ತೋರಿ ದ್ದಾನೆ. ಮಂಗಳವಾರ ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಅಳದಂಗಡಿ, ನಿಡ್ಲೆ, ಮುಂಡಾಜೆ, ಲಾೖಲ, ದಿಡುಪೆ, ನಡ, ಕಲ್ಮಂಜ, ಚಿಬಿದ್ರೆ, ಚಾರ್ಮಾಡಿ, ಕಡಿರುದ್ಯಾವರ ಮೊದಲಾದ ಗ್ರಾಮ ಗಳಲ್ಲಿ ಸಾಧಾರಣ ಮಳೆಯಾಗಿದೆ.

ಬೆಳಗ್ಗೆ ಬಿಸಿಲಿನಿಂದ ಕೂಡಿದ್ದ ವಾತಾವರಣವಿದ್ದು, ಸಂಜೆಯಾಗು ತ್ತಲೇ ಮೋಡ ಕವಿಯಲಾರಂಭಿಸಿ ವಿವಿಧೆಡೆ ಸಾಧಾರಣ ಮಳೆಯಾಗಿದ್ದು ಕೆಲವೆಡೆ ಹನಿ ಮಳೆಯಾಗಿದೆ. ನದಿ ಮೂಲವನ್ನೇ ಆಶ್ರಯಿಸಿರುವ ಕೃಷಿ ತೋಟಗಳಿಗೆ ನೀರಿಲ್ಲದೆ ಪರದಾಡುತ್ತಿದ್ದ ಸಮಯದಲ್ಲಿ ಕೊಂಚ ನಿರಾಳವಾಗಿಸಿದೆ. ಸಂಜೆ 5ರ ಹೊತ್ತಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಸುರಿಯಿತು. ಉಳಿದ ಕೆಲವು ಗ್ರಾಮಗಳಲ್ಲಿ ತುಂತುರು ಮಳೆ ಸುರಿದಿದೆ.

ಎ. 7ರಂದು ತಾಲೂಕಿನ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿತ್ತು. ಎರಡು ವಾರಗಳ ಬಳಿಕ ಮಳೆ ಸುರಿದಿದ್ದರಿಂದ ಕೊಂಚ ತಂಪಾದ ವಾತಾವರಣ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next