Advertisement

ರಾಮನಗರದಲ್ಲಿ ಗುಡುಗು,ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಹತ್ತಾರು ಕುರಿ,ಮೇಕೆಗಳು ಸಾವು

05:55 PM May 01, 2022 | Team Udayavani |

ರಾಮನಗರ: ತಾಲೂಕಿನಲ್ಲಿ ಧಾರಕಾರ ಮಳೆ, ಬಿರುಗಾಳಿ, ಗುಡುಗು ಸಹಿತ ವರುಣ ಅಬ್ಬರಿಸಿದೆ.

Advertisement

ಬಿಡದಿ ಹೋಬಳಿ ಬೆತ್ತನಗೆರೆ ಗ್ರಾಮದಲ್ಲಿ ಸಿಡಿಲು ಬಡಿದು 10 ಕುರಿ, 9 ಮೇಕೆ ಸಾವನ್ನಪ್ಪಿವೆ.

ತಾಲೂಕಿನ ಕಸಬಾ ಹೋಬಳಿ ಕೂನಮುದ್ದನಹಳ್ಳಿ ಕ್ರಾಸ್ ಬಳಿ ರಾಮನಗರ- ಮಾಗಡಿ ರಸ್ತೆಯಲ್ಲಿ, ಭಾರಿ ಗಾಳಿಗೆ ಅರಳಿಮರ ಮತ್ತು ನಾಲ್ಕು ವಿದ್ಯತ್ ಕಂಬಗಳು ರಸ್ತೆಗೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಮಳೆಯಿಂದಾಗಿ ಹೆದ್ದಾರಿ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಲಘು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next