Advertisement

ಮಲೆನಾಡಿನ ಹಲವೆಡೆ ಮಳೆ ಅವಾಂತರ; ರಸ್ತೆ ಸಂಪರ್ಕ ಕಡಿತ

11:37 AM May 19, 2022 | Team Udayavani |

ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿನ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಗುರುವಾರ (ಮೇ 19) ಮೂಡಿಗೆರೆ ಜಿಲ್ಲೆಯ ಮಾಲಿಂಗ ನಾಡು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಆಕಾರದ ಮರದಿಂದಾಗಿ ಕುವೆ -ಮಾಲಿಂಗ ನಾಡು ಸಂಪರ್ಕ ಕಡಿತಗೊಂಡಿದೆ.  ಸುಗಮ ಸಂಚಾರ ವ್ಯವಸ್ಥೆಗೆ ಗ್ರಾಮಸ್ಥರು ಮರ ತೆರವುಗೊಳಿಸುತ್ತಿದ್ದಾರೆ.

Advertisement

ಇನ್ನೊಂದೆಡೆ ಮಳೆಯ ಅಬ್ಬರಕ್ಕೆ ಕಳೆದ 15 ದಿನಗಳ ಹಿಂದೆ ನಿರ್ಮಾಣವಾಗಿದ್ದ ಮನೆ ಕಾಂಪೌಂಡ್ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಮೂಡಿಗೆರೆ ತಾಲ್ಲೂಕಿನ  ಕೂವೆ ಹೋಬಳಿಯ ನಿಡನಹಳ್ಳಿ ಗ್ರಾಮದ ಸುರೇಶ್ ಎಂಬವರ ಮನೆ ಕಾಂಪೌಂಡ್ ಬಿದ್ದಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next