Advertisement

Haryana: ವಿಎಚ್‌ ಪಿ, ಬಜರಂಗದಳ Rallyಗೆ ತಡೆಯಾಜ್ಞೆ ಇಲ್ಲ-ಸೂಕ್ತ ಭದ್ರತೆ ಒದಗಿಸಿ: ಸುಪ್ರೀಂ

04:12 PM Aug 02, 2023 | Team Udayavani |

ನವದೆಹಲಿ: ಹರಿಯಾಣ ಗುರುಗ್ರಾಮ್‌ ಸಮೀಪದ ನುಹ್‌ ಜಿಲ್ಲೆಯಲ್ಲಿ ಇತ್ತೀಚೆಗೆ ಘರ್ಷಣೆ ನಡೆದ ಪ್ರಕರಣದ ನಂತರ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳ ಕಾರ್ಯಕರ್ತರು ದೆಹಲಿಯಲ್ಲಿ ಕೈಗೊಂಡಿರುವ ಪ್ರತಿಭಟನಾ ಜಾಥಾಕ್ಕೆ ತಡೆಯಾಜ್ಞೆ ನೀಡಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್‌ ಬುಧವಾರ  ವಜಾಗೊಳಿಸಿದೆ.

Advertisement

ಇದನ್ನೂ ಓದಿ:ಜಮೀನು,ಆಸ್ತಿ ಅಡ್ಡವಿಟ್ಟರೂ ತೀರಿಸಲಾಗಲಿಲ್ಲ.. ಕಲಾ ನಿರ್ದೇಶಕನ ಬಾಳಿಗೆ ಸಾಲವೇ ಮುಳುವಾಯಿತೇ?

ಹರಿಯಾಣದಲ್ಲಿ ನಡೆದಿದ್ದ ಹಿಂಸಾಚಾರವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಬಿಗಿ ಭದ್ರತೆ ಮತ್ತು ಸಿಸಿಟಿವಿ ಕಣ್ಗಾವಲು ಅಳವಡಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯಲು ಆಸ್ಪದ ನೀಡದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.

ವಿಎಚ್‌ ಪಿ, ಬಜರಂಗದಳದ ಪ್ರತಿಭಟನಾ ಮೆರವಣಿಗೆಯಲ್ಲಿ ಯಾವುದೇ ಪ್ರಚೋದನಕಾರಿ ಭಾಷಣ, ಗಲಭೆ ನಡೆಯದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್‌ ಪೊಲೀಸ್‌ ಇಲಾಖೆ, ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

ಪ್ರತಿಭಟನೆ ನಿಮಿತ್ತವಾಗಿ ಸುಪ್ರೀಂಕೋರ್ಟ್‌ ಉತ್ತರಪ್ರಶೇಶ, ಹರ್ಯಾಣ ಮತ್ತು ದೆಹಲಿ ಸರ್ಕಾರಗಳಿಗೆ ನೋಟಿಸ್‌ ಅನ್ನು ಜಾರಿಗೊಳಿಸಿದ್ದು, ಆಗಸ್ಟ್‌ 4ರಂದು ನಾಲ್ಕನೇ ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next