Advertisement

ಸ್ವರ್ಗ: ಎಐಎಸ್‌ಎಫ್‌ ಜಿಲ್ಲಾ ಸಮ್ಮೇಳನ ಉದ್ಘಾಟನೆ

11:04 PM Jun 18, 2019 | Team Udayavani |

ಪೆರ್ಲ: ಅಖೀಲ ಭಾರತ ವಿದ್ಯಾರ್ಥಿ ಫೆಡರೇಷನ್‌ ವತಿಯಿಂದ ಕಾಸರಗೋಡು ಜಿಲ್ಲಾ ಮಟ್ಟದ ಸಮ್ಮೇಳನ ಸ್ವರ್ಗದಲ್ಲಿ ಜೂ. 15 ಮತ್ತು 16ರಂದು ನಡೆಯಿತು.
ಇದರ ಅಂಗವಾಗಿ ನಡೆದ ಬಹಿರಂಗ ಸಭೆಯನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ಉದ್ಘಾಟನೆಗೈದು ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Advertisement

ಅಧ್ಯಕ್ಷತೆಯನ್ನು ಹಿರಿಯ ಸಿಪಿಐ ನೇತಾರ, ಸಂಘಟಕ ಸಮಿತಿ ಅಧ್ಯಕ್ಷ ಪಿ.ಎಸ್‌. ಕಡಂಬಳಿತ್ತಾಯ ವಹಿಸಿದ್ದರು.

ಎಐಎಸ್‌ಎಫ್‌ ರಾಜ್ಯಾಧ್ಯಕ್ಷ ಅರುಣ್‌ ಬಾಬು, ಕಾರ್ಯದರ್ಶಿ ಸುದೇಶ್‌ ಸುಧಾಕರ್‌, ಜಿಲ್ಲಾ ಅಧ್ಯಕ್ಷ ರಾಕೇಶ್‌ ರಾವಣೇಶ್ವರಂ, ಕಾರ್ಯದರ್ಶಿ ಹರಿದಾಸ್‌ ಪೆರುಂಬಳ, ಸಮಿತಿ ಸದಸ್ಯೆ ಕುಮಾರಿ ಸ್ವಯಾ ಕೆ.ಕೆ., ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್‌ ಪಳ್ಳಿಕಾಪ್ಪಿಲ್‌, ರಾಜ್ಯ ಕೌನ್ಸಿಲ್‌ ಸದಸ್ಯ ಟಿ. ಕೃಷ್ಣನ್‌, ವಿ. ರಾಜನ್‌, ಎಣ್ಮಕಜೆ ಗ್ರಾ.ಪಂ. ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ. ಮೊದಲಾದವರು ಉಪಸ್ಥಿತರಿದ್ದರು.

ಸಿಪಿಐ ಎಣ್ಮಕಜೆ ಲೋಕಲ್‌ ಕಾರ್ಯ ದರ್ಶಿ ನರಸಿಂಹ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next