Advertisement

ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ; ಆಟಗಾರ ಸ್ಥಳದಲ್ಲೇ ಸಾವು

10:19 PM Dec 25, 2022 | Team Udayavani |

ಕುಣಿಗಲ್ : ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಆಟಗಾರನೋರ್ವ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಹೊರ ವಲಯದ ಗಿರಿಗೌಡನಪಾಳ್ಯ ಕ್ರಿಕೆಟ್ ಟ್ರರ್ಪ್ ಮೈದಾನದಲ್ಲಿ ಭಾನುವಾರ ನಡೆದಿದೆ.

Advertisement

ಬೆಂಗಳೂರು ಭುವನೇಶ್ವರಿ ನಗರ ನಿವಾಸಿ ರಮೇಶ್‌ಕುಮಾರ್ (36) ಮೃತ ಕ್ರಿಕೆಟಿಗ.

ರಮೇಶ್‌ಕುಮಾರ್ ಹಾಗೂ ಅವರ ತಂಡ ಕ್ರಿಕಟ್ ಆಟವಾಡಲೆಂದು ಗಿರಿಗೌಡನಪಾಳ್ಯ ಕ್ರಿಕೆಟ್ ಟ್ರರ್ಪ್ ಮೈದಾನಕ್ಕೆ ಭಾನುವಾರ ಬಂದಿದ್ದರು ಮಧ್ಯಾಹ್ನ ಸುಮಾರು 1.30 ರ ಸಮಯದಲ್ಲಿ ರಮೇಶ್ ಕುಮಾರ್ ಬ್ಯಾಟಿಂಗ್ ಮಾಡಿ ರನ್ ಓಡುವ ವೇಳೆ ಹೃದಯಘಾತವಾಗಿ ನೆಲಕ್ಕೆ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ .

ರಮೇಶ್‌ಕುಮಾರ್ ಕುಸಿದು ನೆಲಕ್ಕೆ ಬೀಳುತ್ತಿದ್ದಂತೆ ಸಹ ಆಟಗಾರರು ತಕ್ಷಣ ಓಡಿ ಬಂದು ನೋಡಿದ್ದಾರೆ, ಆದರೆ ಅಷ್ಟರಲ್ಲಿ ರಮೇಶ್‌ಕುಮಾರ ಮೃತಪಟ್ಟಿದ್ದಾರೆ.

ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next