Advertisement

Heart Attack ಸಿದ್ದಾಪುರ: ಚಾಲಕನಿಗೆ ಹೃದಯಾಘಾತ; ಸಾವು

09:29 PM Nov 17, 2023 | Team Udayavani |

ಸಿದ್ದಾಪುರ: ಪಿಕಪ್‌ ವಾಹನದ ಚಾಲಕ ಕೃಷ್ಣ ಚಿಕ್ಕಮಗಳೂರು (35) ಅವರು ನ. 15ರಂದು ಪಿಕಪ್‌ ವಾಹನವನ್ನು ತರಿಕೆರೆ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಕುಂದಾಪುರ ತಾಲೂಕು ಹೆಂಗವಳ್ಳಿ ಎಂಬಲ್ಲಿ ಎದೆನೋವು ಕಾಣಿಸಿಕೊಂಡಿತ್ತು.

Advertisement

ಸ್ಥಳೀಯರು ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸಹೋದರಿ ಲಕ್ಷ್ಮೀ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next