Advertisement

ಜನ್ಮಜಾತ ವೈಕಲ್ಯಗಳನ್ನು ತಡೆಗಟ್ಟಲು ಆರೋಗ್ಯಯುತ ಜೀವನ ಶೈಲಿ ಆಯ್ಕೆಗಳು

12:27 PM Jan 14, 2024 | Team Udayavani |

ಶಿಶುಜನನ ಎಂದರೆ ಒಂದು ಹೊಸ ಉದಯ – ಬೆರಗು, ವಿಶ್ವಾಸ ಮತ್ತು ಅನಂತ ಸಾಧ್ಯತೆಗಳ ಕನಸುಗಳು. ಹೀಗಾಗಿ ಗರ್ಭಧಾರಣೆಗೆ ನೀವು ಉತ್ಕೃಷ್ಟ ಮಟ್ಟದಲ್ಲಿ ಸಿದ್ಧರಾಗುವುದು, ಗರ್ಭ ಧರಿಸಿದ ಅವಧಿಯಲ್ಲಿ ಆರೋಗ್ಯಯುತವಾಗಿ ಇರುವುದು ಮತ್ತು ಆರೋಗ್ಯಯುತ ಶಿಶುವಿಗೆ ಜನ್ಮ ನೀಡುವುದು ನೀವು ಮನಶ್ಶ್ಯಾಂತಿಯಿಂದ ಇರುವುದಕ್ಕೆ ಬಹಳ ಮುಖ್ಯವಾಗಿದೆ. ಶಿಶುವಿನ ಎಲ್ಲ ಜನ್ಮಜಾತ ವೈಕಲ್ಯಗಳನ್ನು ತಡೆಗಟ್ಟಲು ಸಾಧ್ಯವಿಲ್ಲ; ಆದರೆ ಇನ್ನೂ ಜನಿಸದ ಶಿಶುವನ್ನು ಆರೋಗ್ಯಯುತವಾಗಿರಿಸಲು ಜನನಪೂರ್ವ ಕಾಲದಲ್ಲಿ ನಾವು ಅನುಸರಿಸಬಹುದಾದ ಹಲವು ಕ್ರಮಗಳಿವೆ.

Advertisement

ಅತ್ಯುತ್ತಮ ಆರೋಗ್ಯ ಅಭ್ಯಾಸಗಳನ್ನು ಅನುಸರಸಿದರೆ ಜನ್ಮಜಾತ ವೈಕಲ್ಯಗಳನ್ನು ತಡೆಗಟ್ಟಬಹುದಾಗಿದೆ:

  • ಆರೋಗ್ಯಯುತ ದೇಹತೂಕ ಗುರಿಯನ್ನು ತಲುಪಿ, ಕಾಯ್ದಿರಿಸಿಕೊಳ್ಳಲು ಶ್ರಮಿಸಿ: ಗರ್ಭಧಾರಣೆಗೆ ಮುನ್ನ ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರುವ ಮಹಿಳೆಯರು ಗರ್ಭಧಾರಣೆಯ ಅವಧಿಯಲ್ಲಿ ತೊಂದರೆಗಳಿಗೆ ತುತ್ತಾಗುವ ಮತ್ತು ಶಿಶು ವೈಕಲ್ಯಗಳೊಂದಿಗೆ ಜನಿಸುವ ಸಾಧ್ಯತೆಗಳು ಹೆಚ್ಚು.
  • ಮಧುಮೇಹ/ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ: ಗರ್ಭಧಾರಣೆಗೆ ಮುನ್ನ ಮತ್ತು ಗರ್ಭ ಧರಿಸಿದ ಅವಧಿಯಲ್ಲಿ ಮಧುಮೇಹ/ ಅಧಿಕ ರಕ್ತದೊತ್ತಡದ ಮೇಲೆ ನಿಯಂತ್ರಣ ಹೊಂದಿರದೆ ಇದ್ದಲ್ಲಿ ಜನ್ಮಜಾತ ವೈಕಲ್ಯಗಳು ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆಯಲ್ಲದೆ ಗರ್ಭಿಣಿಯಾಗಿರುವ ಸಮಯದಲ್ಲಿಯೂ ಸಂಕೀರ್ಣ ಆರೋಗ್ಯ ಸಮಸ್ಯೆಗೆ ತುತ್ತಾಗುವ ಅಪಾಯವಿರುತ್ತದೆ.
  • ಪ್ರತೀ ದಿನ 400 ಮೈಕ್ರೊಗ್ರಾಂ (ಎಂಸಿಜಿ) ಫೋಲಿಕ್‌ ಆಮ್ಲವನ್ನು ಪಡೆಯಿರಿ: ಮಹಿಳೆಯ ಆಹಾರ ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೋಲಿಕ್‌ ಆಮ್ಲ ಒಳಗೊಂಡಿದ್ದಲ್ಲಿ ಅಥವಾ ಗರ್ಭ ಧರಿಸುವುದಕ್ಕೆ 2 ತಿಂಗಳು ಮುಂಚಿತವಾಗಿ ಮತ್ತು ಗರ್ಭ ಧರಿಸಿದ ಅವಧಿಯಲ್ಲಿ ಫೋಲಿಕ್‌ ಆಮ್ಲದ ಸಪ್ಲಿಮೆಂಟ್‌ ಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಅದರಿಂದ ಶಿಶುವಿನ ಮೆದುಳು ಮತ್ತು ಬೆನ್ನುಹುರಿಗೆ ಸಂಬಂಧಿಸಿದ ಪ್ರಮುಖ ವೈಕಲ್ಯಗಳು ಉಂಟಾಗುವುದು ತಪ್ಪುತ್ತದೆ.
  • ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಸಾಮಾನ್ಯ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ: ಹಿಮೊಗ್ಲೊಬಿನ್‌, ಥೈರಾಯ್ಡ ಕಾರ್ಯಚಟುವಟಿಕೆ, ರಕ್ತದಲ್ಲಿ ಸಕ್ಕರೆಯ ಅಂಶ, ತಲಸ್ಸೇಮಿಯಾ/ ಸಿಕಲ್‌ ಸೆಲ್‌ ಅನೀಮಿಯಾ ಮತ್ತು ರುಬೆಲ್ಲಾ ವಿರುದ್ಧ ರೋಗನಿರೋಧಕ ಶಕ್ತಿಯಂತಹ ತಪಾಸಣೆಗಳನ್ನು ಮಾಡಿಸಿಕೊಳ್ಳಿ.
  • ದೀರ್ಘ‌ಕಾಲೀನ ಔಷಧ ತೆಗೆದುಕೊಳ್ಳುತ್ತಿದ್ದಲ್ಲಿ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಸಮಾಲೋಚಿಸಿ: ಮಹಿಳೆಯೊಬ್ಬರು ಗರ್ಭಿಣಿಯಾದಲ್ಲಿ ಅಥವಾ ಗರ್ಭ ಧರಿಸುವುದಕ್ಕೆ ಯೋಜಿಸುತ್ತಿದ್ದಲ್ಲಿ ಆಕೆ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಸಮಾಲೋಚಿಸದೆ ಈಗಿರುವ ಔಷಧಗಳನ್ನು ಸ್ಥಗಿತಗೊಳಿಸಬಾರದು ಅಥವಾ ಹೊಸ ಔಷಧ ಆರಂಭಿಸ ಬಾರದು.

-ಮುಂದಿನ ವಾರಕ್ಕೆ

-ಡಾ| ಪುಂಡಲೀಕ ಬಾಳಿಗಾ,

ಕನ್ಸಲ್ಟಂಟ್‌ ಫೀಟಲ್‌ ಮೆಡಿಸಿನ್‌ ಕೆಎಂಸಿ ಆಸ್ಪತ್ರೆ,

Advertisement

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ಮತ್ತು ಫೀಟಲ್‌ ಮೆಡಿಸಿನ್‌ ವಿಭಾಗ, ಕೆಎಂಸಿ ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next