Advertisement

ಜಾರ್ಕಳ ಆರೋಗ್ಯ ಶಿಬಿರ ಉದ್ಘಾಟನೆ

10:21 PM Mar 26, 2019 | Team Udayavani |

ಅಜೆಕಾರು: ರೋಟರಿ ಕ್ಲಬ್‌ ಕಾರ್ಕಳ, ರಾಕ್‌ ಸಿಟಿ ಕಾರ್ಕಳ, ಟಿಎಮ್‌ಎ ಪೈ ಆಸ್ಪತ್ರೆ ಕಾರ್ಕಳ ಹಾಗೂ ಯುವಸ್ಪಂದನ ಗೆಳೆಯರ ಬಳಗ ಜಾರ್ಕಳ ಮುಂಡ್ಲಿ ಇದರ ಸಹಯೋಗದಲ್ಲಿ ಜಾರ್ಕಳ ಮುಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಶಿಬಿರ ನಡೆಯಿತು.

Advertisement

ಅಧ್ಯಕ್ಷತೆಯನ್ನು ಬಸದಿಯ ಪುರೋಹಿತ ವೀರಸೇನ ಇಂದ್ರ ವಹಿಸಿದ್ದರು. ರೋಟರಿ ಕ್ಲಬ್‌ ಮಾಜಿ ಗವರ್ನರ್‌ ಡಾ| ಭರತೇಶ್‌ ಉದ್ಘಾಟಿಸಿದರು.
ರೋಟರಿ ಕ್ಲಬ್‌ ಕಾರ್ಕಳ ಅಧ್ಯಕ್ಷ ಸುಭಾಸ್‌ ಕಾಮತ್‌, ಟಿಎಮ್‌ಎ ಪೈ ಆಸ್ಪತ್ರೆ ಕಾರ್ಕಳದ ಡಾ| ಚಿದಾನಂದ ಕುಲಕರ್ಣಿ, ಡಾ| ನಟೇಶ್‌, ಸಂಪತ್‌ ಕುಮಾರ್‌ ಹೆಗ್ಡೆ, ರಘುರಾಮ ಶೆಟ್ಟಿ, ಧನಂಜಯ್‌ ಜೈನ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಭಾಸ್ಕರ್‌ ಆಚಾರ್ಯ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಜೀವ ದೇವಾಡಿಗ, ಶಾಲಾ ಮುಖ್ಯ ಶಿಕ್ಷಕಿ ಮುಕ್ತಾ ನಾಯಕ್‌, ಜಗದೀಶ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಅಭಿನಂದನ್‌ ಜೈನ್‌ ಸ್ವಾಗತಿಸಿದರು. ಪ್ರಜ್ವಲ್‌ ಜೈನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next