Advertisement

ಕಾಶ್ಮೀರ: ನಾಪತ್ತೆಯಾದ ವ್ಯಕ್ತಿಯ ಶಿರಚ್ಛೇದಿತ ದೇಹ ಪತ್ತೆ

03:46 PM Apr 06, 2018 | Team Udayavani |

ಶ್ರೀನಗರ : ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಿಂದ ಕಳೆದ ಬುಧವಾರ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶಿರಚ್ಛೇದಿತ ದೇಹ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈ ಶಿರಚ್ಛೇದಿತ ದೇಹವು ಮನ್‌ಜೂರ್‌ ಅಹ್ಮದ್‌ ಭಟ್‌ ಎಂಬವನದ್ದು ಗೊತ್ತಾಗಿದೆ. ಬಂಡೀಪೋರಾ ಹೊರವಲಯದ ಹಾಜಿನ್‌ ಎಂಬಲ್ಲಿ  ಇಂದು ಬೆಳಗ್ಗೆ ತಲೆ ಇಲ್ಲ ಆತನ ಮೃತ ದೇಹವು ಪತ್ತೆಯಾಯಿತು ಎಂದು ಹಿರಿಯ ಪೊಲೀಸ್‌ ಸುಪರಿಂಟೆಂಡೆಂಟ್‌ ಶೇಖ್‌ ಝಲ್‌ಫಿಕರ್‌ ತಿಳಿಸಿದ್ದಾರೆ. 

ಎ.4-5ರ ನಡುವಿನ ರಾತ್ರಿ ಅಪಹೃತನಾಗಿದ್ದ ಮನ್‌ಜೂರ್‌ನನ್ನು ಉಗ್ರರು ಶಿರಚ್ಛೇದನ ಮಾಡಿದ್ದಾರೆ; ಅಮಾಯಕರನ್ನು ಹೀಗೆ ತಲೆ ಕಡಿದು ಅವರ ದೇಹವನ್ನು ಎಸೆಯುವ ಮೂಲಕ ಉಗ್ರರು ರಾಕ್ಷಸೀ ಪ್ರವೃತ್ತಿ ತೋರಿದ್ದಾರೆ ಎಂದು ಝುಲ್‌ಫಿಕರ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next