Advertisement
ಗೌಂಡಿ ಕೆಲಸ ಮಾಡಿಕೊಂಡಿದ್ದ ಹನಮಂತ ಪತ್ನಿ ಸರೋಜಾ ಊರ್ಫ್ ರೇಖಾ ನಡತೆಯ ಬಗ್ಗೆ ಸಂಶಯ ಪಡುತ್ತಿದ್ದ. ಅಲ್ಲದೆ ಈ ವಿಷಯವಾಗಿ ಪದೇ ಪದೇ ಜಗಳ ಮಾಡುವುದು, ಹಲ್ಲೆ ಮಾಡುವುದು ಮಾಡುತ್ತಿದ್ದ. 2015 ಮಾರ್ಚ್ 11ರಂದು ಕುಡಿದು ಬಂದು ಪತ್ನಿ ಸರೋಜಾರೊಂದಿಗೆ ಜಗಳ ಮಾಡಿ, ನಂತರ ತಲೆಗೆ ಬಡಿಗೆಯಿಂದ ಹೊಡೆದು ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆಗೈದು ಪರಾರಿಯಾಗಿದ್ದ.
ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಅಲ್ಲದೆ ಹನುಮಂತನ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 5ನೇ ಅಪರ ಜಿಲ್ಲಾ, ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಎಸ್. ಗಂಗಣ್ಣವರ ಅವರು, ಹನಮಂತ ಪತ್ನಿ ಸರೋಜಾಳನ್ನು ಕೊಲೆ ಮಾಡಿರುವುದು ಸಾಬೀತಾಗಿದೆ, ಈ ಪ್ರಕರಣದಲ್ಲಿ ಆತ ತಪ್ಪಿತಸ್ಥನಾಗಿದ್ದಾನೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ಕೊಟ್ಟಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಡಿ.ಎ.
ಭಾಂಡೇಕರ ವಾದ ಮಂಡಿಸಿದ್ದರು.