Advertisement

ಆತ ಭಯೋತ್ಪಾದಕ; ಸರ್ಕಾರದಿಂದ ನಿರ್ದಾಕ್ಷಿಣ್ಯ ಕ್ರಮ

11:47 PM Jan 22, 2020 | Team Udayavani |

ಚಿಕ್ಕಬಳ್ಳಾಪುರ: ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿರುವ ಆರೋಪಿಯನ್ನು ಅವನ ಮೂಲ, ಜಾತಿ, ಧರ್ಮದಿಂದ ನೋಡುವ ಪ್ರಶ್ನೆ ಇಲ್ಲ. ಅವನೊಬ್ಬ ಭಯೋತ್ಪಾದಕ. ಅವನ ವಿರುದ್ದ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಯನ್ನು ರಾಜ್ಯ ಸರ್ಕಾರ ಆರೋಪಿ ಸ್ಥಾನದಲ್ಲಿಯೇ ನೋಡಲಿದೆ. ಆತನಿಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಸರ್ಕಾರ ಆಗಿದ್ದಕ್ಕೆ ಅವನನ್ನು ಬಂಧಿಸಿದೆ. ಬೇರೆ ಸರ್ಕಾರ ಇದ್ದಿದ್ದರೆ ಅವನನ್ನು ಮುಗ್ಧನ ಸ್ಥಾನದಲ್ಲಿ ಕೂರಿಸುತ್ತಿದ್ದರು ಎಂದರು.

ಎಚ್‌ಡಿಕೆ ಹೇಳಿಕೆ ತರವಲ್ಲ: ಬಾಂಬ್‌ ಇಟ್ಟವರನ್ನು ಅಮಾಯಕರು, ಮುಗ್ಧ ರೆಂದು ಹೇಳುವ ಹಾಗೂ ಅದು ಪೊಲೀ ಸರ ಅಣಕು ಪ್ರದರ್ಶನ ಎಂದು ಟೀಕಿಸಿರುವ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ ಪೂಜಾರಿ, ಸ್ವಾಭಾವಿಕವಾಗಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರ ಸ್ವಾಮಿಗೆ ಅವರದೇ ಆದ ಗೌರವ ಇದೆ. ಆದ್ದರಿಂದ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡದಿರಲು ನಿರ್ಧರಿಸಿದ್ದೇನೆ ಎಂದರು.

ಇವರ ಸರ್ಕಾರದಲ್ಲಿದ್ದ ಪೊಲೀಸರೇ ನಮ್ಮ ಸರ್ಕಾರದಲ್ಲಿದ್ದಾರೆ. ಸ್ಥಳ ಬದಲಾವಣೆ ಆಗಿರಬಹುದು. ಸಿಎಂ, ಮಂತ್ರಿ ಬದಲಾಗಿರಬಹುದು. ಆದರೆ, ಸಿಎಂ ಆಗಿದ್ದ ಕುಮಾರಸ್ವಾಮಿಯವರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟದ್ದನ್ನು ಅದು ಬಾಂಬ್‌ ಅಲ್ಲ. ಪಟಾಕಿ, ಪೊಲೀಸರ ನಾಟಕ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಪೊಲೀಸರು, ಶ್ವಾನದಳ ತಮ್ಮ ಪ್ರಾಣದ ಹಂಗು ತೊರೆದು ಬಾಂಬ್‌ನ್ನು ನಿಷ್ಕ್ರಿಯಗೊಳಿಸಿ, ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಸರ್ಕಾರ ಭಯೋ ತ್ಪಾದಕ ಕೃತ್ಯಗಳನ್ನು ಸಹಿಸಲ್ಲ. ಯಾರೇ ಮಾಡಿರಲಿ, ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇಡೀ ಮಂಗಳೂರಿನ ಎಲ್ಲ ಸರಹದ್ದುಗಳ ಮೇಲೆ ಸಾಕಷ್ಟು ಕಣ್ಗಾವಲು ಇರಿಸಲಾಗಿದೆ ಎಂದರು.

Advertisement

ಇದೊಂದು ಭದ್ರತಾ ವೈಫ‌ಲ್ಯವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದನ್ನು ಭದ್ರತಾ ವೈಫ‌ಲ್ಯ ಅಂತ ಹೇಳಲು ಆಗುವುದಿಲ್ಲ. ಪ್ರತಿ ವ್ಯಕ್ತಿಗೂ ಪೊಲೀಸರನ್ನು ಕೊಡುವುದು ಸುಲಭವಲ್ಲ. ಅನೇಕ ವಿದ್ವಂಸಕ ಕೃತ್ಯಗಳಲ್ಲಿ ನೆರೆಯ ಕೇರಳ ರಾಜ್ಯದವರು ಭಾಗಿಯಾಗಿದ್ದಾರೆಂಬ ಶಂಕೆ ಖಚಿತವಾಗಿ ಇದ್ದು, ಈ ಬಗ್ಗೆ ಪೊಲೀಸ್‌ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

ಮುಸ್ಲಿಮನಾಗಿದ್ದರೆ ಬಿಜೆಪಿ ವರ್ತನೆ ಬೇರೆಯಾಗುತ್ತಿತ್ತು
ಬೆಂಗಳೂರು: ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ರಾವ್‌ ಅಲ್ಲದೇ ಬೇರೆ ಯಾರಾದರೂ ಆಗಿದಿದ್ದರೆ ಬಿಜೆಪಿ ನಾಯ ಕರ ವರ್ತನೆಯೇ ಬೇರೆಯಾಗಿರುತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟೀಕಿಸಿದ್ದಾರೆ. ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿ,ಆರೋಪಿ ಆದಿತ್ಯರಾವ್‌ ಹಿಂದೆಯೂ ಕೆಲವು ಘಟನೆ ಗಳಲ್ಲಿ ಭಾಗಿಯಾಗಿದ್ದರಂತೆ. ಆತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕಬೇಕಿದೆ.

ಆದಿತ್ಯರಾವ್‌ ಬಂಧನದ ಸುದ್ದಿ ಬಿಜೆಪಿಯವರಿಗೆ ಸಂತೋಷ ತಂದಿರಲಿಕ್ಕಿಲ್ಲ ಎಂದರು. ಆದಿತ್ಯರಾವ್‌ ಜಾಗದಲ್ಲಿ ಬೇರೆಯ ವರಿದ್ದರೆ ಬಿಜಿಪಿ ನಾಯಕರ ಅಭಿಪ್ರಾಯಗಳೇ ಬೇರೆಯಾಗಿರುತ್ತಿತ್ತು. ಈಗ ರಾವ್‌ ಇರುವುದರಿಂದ ಬಿಜೆಪಿ ನಾಯಕರಿಂದ ಯಾವ ಹೇಳಿಕೆಯೂ ಹೊರ ಬೀಳುವುದಿಲ್ಲ. ಆರೋಪಿ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿರುವ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸಾಹಿತಿ ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವುದು ಪತ್ತೆಯಾಗಿದೆ. ಬಿಜೆಪಿಯವರು ಅವರನ್ನು ಸಮರ್ಥನೆ ಮಾಡಿಕೊಂಡಿದ್ದರು. ಈಗ ಗೊತ್ತಿದ್ದರೂ ಏನೂ ಆಗಿಲ್ಲದಂತೆ ಸುಮ್ಮನಿದ್ದಾರೆ. ಆದರೆ, ಮುಸ್ಲಿಮರಿದ್ದರೆ ದೊಡ್ಡ ರಂಪಾಟ ಮಾಡುತ್ತಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next