Advertisement

Uppunda;ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿಗೆ ಬಿದ್ದು ಸಾವು

07:40 PM Jul 10, 2023 | Team Udayavani |

ಉಪ್ಪುಂದ: ಹೊಳೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಮೀನುಗಾರ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಡಿಕಲ್‌ನಲ್ಲಿ ಜು. 9ರಂದು ಸಂಭವಿಸಿದೆ.

Advertisement

ಉಪ್ಪುಂದ ಗ್ರಾ. ಪಂ. ವ್ಯಾಪ್ತಿಯ ಮಡಿಕಲ್‌ ಕೊಂಬಾಡಿ ಮನೆ ರಾಮದಾಸ (40) ಮೃತಪಟ್ಟವರು.

ರವಿವಾರ ಅವರು ಉದಯ ಅವರ ಜತೆ ಮುಂಜಾನೆ ಮಡಿಕಲ್‌ ಹೊಳೆಗೆ ಮೀನುಗಾರಿಕೆಗೆ ಹೋಗಿದ್ದು, ಬಲೆ ಹಾಕಿ ಮೀನುಗಾರಿಕೆ ಮಾಡುತ್ತಿರುವ ಸಮಯ ರಾಮದಾಸ ಬಲೆಯನ್ನು ಎಳೆಯುತ್ತಿರುವ ಸಂದರ್ಭ ಆಕಸ್ಮಿಕವಾಗಿ ನೀರಿಗೆ ಕುಸಿದು ಬಿದ್ದಿದ್ದಾರೆ.

ತತ್‌ಕ್ಷಣ ಬೈಂದೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next