Advertisement

ಸಚಿನ್‌ ಪೈಲಟ್‌- ಅಶೋಕ್ ಗೆಹ್ಲೋಟ್ ಮತ್ತೆ ವಾಗ್ವಾದ

12:59 AM Jun 28, 2022 | Team Udayavani |

ಜೈಪುರ: ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಶಾಸಕ ಸಚಿನ್‌ ಪೈಲಟ್‌ ನಡುವಿನ ವಾಕ್ಸಮರ ಮತ್ತೆ ತೀವ್ರಗೊಂಡಿದೆ.

Advertisement

2020ರಲ್ಲಿ ತಮ್ಮ ನೇತೃತ್ವದಲ್ಲಿ ನಡೆದಿದ್ದ ಭಿನ್ನಮತದಿಂದಾಗಿ ಕಾಂಗ್ರೆಸ್‌ ಸರಕಾರ ಪತನದ ಅಂಚಿಗೆ ಬಂದಿತ್ತು ಎಂಬ ಅಶೋಕ್‌ ಗೆಹ್ಲೋಟ್ ಆರೋಪವನ್ನು ತಿರಸ್ಕರಿಸಿದ್ದಾರೆ.

ಸಿಎಂ ಗೆಹ್ಲೋಟ್ ಅವರು ತಮ್ಮನ್ನು ನಿರುಪಯುಕ್ತ ವ್ಯಕ್ತಿ ಎಂದು ಟೀಕಿಸಿದ್ದಾರೆ.

ಇದೇ ಮಾತನ್ನು ಹಿಂದಿನ ಸಂದರ್ಭಗಳಲ್ಲಿಯೂ ಹೇಳಿದ್ದರು ಎಂದು ಮಾಜಿ ಡಿಸಿಎಂ ದೂರಿದ್ದಾರೆ. ರವಿವಾರ ಮಾತನಾಡಿದ್ದ ಸಿಎಂ ಅಶೋಕ್‌ ಗೆಹ್ಲೋಟ್ ಅವರು ಸಚಿನ್‌ ಪೈಲಟ್‌ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ವಿರುದ್ಧ ಆಕ್ಷೇಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next