Advertisement

ಎಚ್‌ಡಿಕೆ, ರೇವಣ್ಣ ನಡೆ ಸರಿ ಇಲ್ಲ: ರಾಯರಡ್ಡಿ

07:20 AM Jul 11, 2019 | Team Udayavani |

ಕೊಪ್ಪಳ: ಮೈತ್ರಿ ಸರ್ಕಾರ ಹೊಸ ಗಂಡ-ಹೆಂಡತಿ ಇದ್ದಂತೆ. ಕೆಲವು ಸಲ ಭಿನ್ನಾಭಿಪ್ರಾಯ ಬರುವುದು ಸಹಜ. ನಾವಿನ್ನೂ ಡೈವರ್ಸ್‌ ಆಗಿಲ್ಲ. ಆದರೆ, ಕುಮಾರಸ್ವಾಮಿ, ರೇವಣ್ಣ ಅವರ ಕಾರ್ಯವೈಖರಿ ಸರಿ ಇಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

Advertisement

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಂದು ವೇಳೆ ಸರ್ಕಾರ ಪತನವಾದರೂ ಯಡಿಯೂರಪ್ಪ ಸಿಎಂ ಆಗುವುದು ಅನುಮಾನ. ಅವರು ಆಷಾಢ, ಘಳಿಗೆ, ವಾರ ನಂಬುತ್ತಾರೆ ಎಂದು ಹೇಳಿದರು.

ಇಂದು ಎಲ್ಲ ಪಕ್ಷಗಳು ತಲೆ ತಗ್ಗಿಸುವ ಕೆಲಸ ಮಾಡುತ್ತಿವೆ. ಸೈದ್ಧಾಂತಿಕ ವಿಚಾರಕ್ಕೆ ರಾಜೀನಾಮೆ ಕೊಟ್ಟರೆ ಅದಕ್ಕೊಂದು ಗೌರವ ಇರುತ್ತೆ. ಆದರೆ, ಅಧಿ ಕಾರದ ಆಸೆಗೆ ರಾಜೀನಾಮೆ ಕೊಡುತ್ತಿರುವುದನ್ನು ನೋಡಿದರೆ ಬೇಸರ ಆಗುತ್ತದೆ. ಇದೆಲ್ಲವನ್ನೂ ನೋಡಿದರೆ ಚುನಾವಣೆಗೆ ಹೋಗುವುದು ಉತ್ತಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next