Advertisement

ಎಚ್‌ಡಿಕೆ ಸರ್ಕಾರ ಪತನ ಶಕ್ತಿ ಕುಂದಗೋಳಕ್ಕಿದೆ: ಶ್ರೀ ರಾಮುಲು

07:01 AM May 12, 2019 | Lakshmi GovindaRaj |

ಕುಂದಗೋಳ: ಐದು ಜಿಲ್ಲೆಗಷ್ಟೇ ಸೀಮಿತವಾದ ಸಿಎಂ ಕುಮಾರಸ್ವಾಮಿ ಅವರ ಸರ್ಕಾರವನ್ನು ಪತನಗೊಳಿಸುವ ಶಕ್ತಿ ಈ ಕ್ಷೇತ್ರದ ಮತದಾರರಲ್ಲಿದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದರು.

Advertisement

ಕಳಸ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ಮತಯಾಚಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ನಿರ್ಲಕ್ಷಿಸಿದ ಸಮ್ಮಿಶ್ರ ಸರ್ಕಾರದ ಸಿಎಂ ಕೇವಲ 5 ಜಿಲ್ಲೆಗಳಿಗೆ ಸೀಮಿತವಾದ ಬಜೆಟ್‌ ಮಂಡಿಸಿರುವುದಕ್ಕೆ ಜನ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ.

ಈಗಾಗಲೇ ಪಕ್ಷೇತರ ಶಾಸಕರು ನಮ್ಮೊಂದಿಗಿದ್ದಾರೆ. ಇನ್ನೂ 20 ಶಾಸಕರು ಮೇ 23ರ ನಂತರ ನಮ್ಮೊಟ್ಟಿಗೆ ಕೈ ಜೋಡಿಸುತ್ತಾರೆ. ಬಳಿಕ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಖಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next