Advertisement

HDD; ಕಾಲ ಬರುತ್ತದೆ, ಹೋರಾಟಕ್ಕೆ ನಿಲ್ಲುತ್ತೇನೆ: ಇಲ್ಲಿಂದ ಮುಂದೆ ನನ್ನ ಹೋರಾಟ

01:31 AM Sep 15, 2024 | Team Udayavani |

ಬೆಂಗಳೂರು: ಕಳೆದ ನಾಲ್ಕು ತಿಂಗಳು ಮನೆಯಿಂದ ಹೊರ ಬರುವ ಪರಿಸ್ಥಿತಿಯೇ ಇರಲಿಲ್ಲ. ಇಲ್ಲಿಂದ ಮುಂದಕ್ಕೆ ನನ್ನ ಹೋರಾಟ ಮತ್ತೆ ಆರಂಭವಾಗುತ್ತದೆ. ನನ್ನನ್ನು ಮುಗಿಸಲು ಸಾಧ್ಯವಿಲ್ಲ. ಕಾರ್ಯಕರ್ತರ ಜತೆ ಓಡಾಡಿಕೊಂಡೆ ಪಕ್ಷ ಕಟ್ಟುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌. ಡಿ.ದೇವೇಗೌಡ ಗುಡುಗಿ¨ªಾರೆ.

Advertisement

ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನನ್ನು ಮೂರು ತಿಂಗಳು ಮನೆಯಲ್ಲಿ ಮಲಗಿಸಿದ್ದೀರಿ. ಈ ದೇಶದಲ್ಲಿ ನಾನು ಅಷ್ಟೊಂದು ತಲೆಮರೆಸಿಕೊಳ್ಳುವ ರಾಜಕಾರಣಿ ಆಗಿದ್ದೇನಾ? 62 ವರ್ಷ ಶಾಸಕನಾಗಿ, ವಿಪಕ್ಷದ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿ ಯಾಗಿ ಕೆಲಸ ಮಾಡಿದ್ದೇನೆ. ಯಾವ ದೇವೇಗೌಡ ಹೋರಾಟ ಮಾಡಿದ್ದನೋ, ಮೋದಿಯವರ ಜತೆ ಕೂತು ಚಿಕ್ಕಬಳ್ಳಾಪುರ ಮತ್ತು ಮೈಸೂರಿನಲ್ಲಿ ಪ್ರಚಾರ ಮಾಡಿದ್ದೇನೋ ಅದೇ ದೇವೇಗೌಡ ಮತ್ತೆ ಹೋರಾಟಕ್ಕೆ ನಿಂತಿದ್ದೇನೆ ಎಂದರು.
ಇನ್ನು ಮುಂದೆ ಎಲ್ಲ ಕಡೆಗಳಲ್ಲಿ ಪ್ರವಾಸ ಮಾಡುತ್ತೇನೆ. ಪಕ್ಷದ ಕಚೇರಿಗೂ ಬರುತ್ತೇನೆ. ಎನ್‌ಡಿಎ ಮೈತ್ರಿ ಕೂಟದಲ್ಲಿ ನಾವು ಸೇರಿದ್ದು, ಜೆಡಿಎಸ್‌ ಪಕ್ಷ ಮೈತ್ರಿಗೆ ಯಾವುದೇ ಧಕ್ಕೆ ತರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next