Advertisement

ಈಶ್ವರಪ್ಪ ಅವರನ್ನು ಬಂಧನ ಮಾಡಿ ಏನು ಮಾಡುತ್ತೀರಿ? : ಕಾಂಗ್ರೆಸ್ ಹೋರಾಟಕ್ಕೆ ಹೆಚ್ ಡಿಕೆ ಕಿಡಿ

05:27 PM Apr 16, 2022 | Team Udayavani |

ವಿಜಯಪುರ: ಸಚಿವ ಸ್ಥಾನಕ್ಕೆ ರಾಜನಾಮೆ ನೀಡಿರುವ ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ್ದೇನು. ಈಶ್ವರಪ್ಪ ಅವರನ್ನು ಬಂಧನ ಮಾಡಿ ಏನು ಮಾಡುತ್ತೀರಿ ಎಂದು ಕಾಂಗ್ರೆಸ್ ಹೋರಾಟಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈಶ್ವರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ.

Advertisement

ಶನಿವಾರ ಜಿಲ್ಲೆಯ ಆಲಮಟ್ಟಿಯ ಕೃಷ್ಣಾ ತೀರದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ರಾಜೀನಾಮೆ ಆಯ್ತು, ಈಗ ಬಂಧನ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ರಾಜಕೀಯ ಪ್ರೇರಿತ ಹೋರಾಟಕ್ಕೆ ಇಳಿದಿದೆ. ರಾಜಕೀಯವಾಗಿ ವಿಷಯವೇ ಇಲ್ಲದೆ ಈಶ್ವರಪ್ಪ ಅವರನ್ನು ಗುರಿಯಾಗಿಸಿಕೊಂಡು ಬೀದಿಗೆ ಇಳಿದಿದ್ದಾರೆ ಎಂದು ಟೀಕಿಸಿದರು.

ಇಷ್ಟಕ್ಕೂ ಕುರುಬ ಸಮಾಜಕ್ಕೆ ಸೇರಿದ್ದ ಕಲ್ಲಪ್ಪ ಹಂಡಿಬಾಗ ಎಂಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಾಗ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಾ, ಅಂದಿನ ಗೃಹಮಂತ್ರಿ ಬಂಧನವಾಗಿತ್ತಾ. ಸರ್ಕಾರದ ಅಂದಿನ ನಡವಳಿಕೆಯಿಂದಲೇ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು, ನೀವೇನು ಮಾಡಿದಿರಿ ಎಂದು ಕಾಂಗ್ರೆಸ್ ನಾಯಕರನ್ನು ಕುಟುಕಿದರು.

ಇದನ್ನೂ ಓದಿ:ಭಾರತ ನಿರುದ್ಯೋಗ ಸಮಸ್ಯೆಯನ್ನೇ ಎದುರಿಸಬೇಕಾಗಿಲ್ಲ..ಆದರೆ ನಮ್ಮ ಜನರು: ಪ್ರಧಾನಿ ಹೇಳಿದ್ದೇನು?

ಕಾಂಗ್ರೆಸ್ ಪಕ್ಷದ ನಾಯಕರಿಗೆ ರಾಜಕೀಯವಾಗಿ ವಿಷಯಗಳೇ ಇಲ್ಲ. ನಿಮ್ಮ ಕಾಲದಲ್ಲಿ ಏನೇನು ಆಯ್ತು ಎಂದು ಹೇಳಿ. ನಿಮ್ಮ ಈ ನಡವಳಿಕೆಯಿಂದ ನಿಮಗೆ ಲಾಭವಾಗದು. ಸಂತೋಷ್ ಆತ್ಮಹತ್ಯೆ ವಿಷಯದಲ್ಲಿ ಸತ್ಯಾಸತ್ಯತೆ ಹೊರ ಬರಲಿ, ಇದಕ್ಕಾಗಿ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಮೊದಲ ದಿನವೇ ಹೇಳಿದ್ದೇನೆ. ಸತ್ಯಾಸತ್ಯತೆ ಜನರ ಮುಂದಿಡುವುದು ಸರ್ಕಾರ ಕರ್ತವ್ಯ ಎಂದು ಅಂದೇ ಹೇಳಿದ್ದೇನೆ. ಇದರ ಹಿಂದೆ ಮಹಾನಾಯಕ ಇದ್ದಾರೋ, ಖಳನಾಯಕ ಇದ್ದಾರೋ ನನಗಂತೂ ಗೊತ್ತಿಲ್ಲ ಎಂದು ಹರಿಹಾಯ್ದರು.

Advertisement

ರಾಜ್ಯದಲ್ಲಿ ಮತೀಯ ಗಲಭೇ ಆದಾಗ ಮನೆ ಸೇರಿಕೊಂಡಿದ್ದ ಕಾಂಗ್ರೆಸ್ ನಾಯಕರು, ಈಶ್ವರಪ್ಪ ಅವರ ಭ್ರಷ್ಟಾಚಾರದ ವಿಷಯವನ್ನು ಮುಂದಿಟ್ಟುಕೊಂಡು ರಾಜೀನಾಮೆ ಆಯ್ತು, ಈಗ ಬಂಧನ ಎಂದು ಪಟ್ಟು ಹಿಡಿದಿರುವುದು ಕಾಂಗ್ರೆಸ್ ಮತ ಪ್ರಹಸನ ಎಂದು ಟೀಕಿಸಿದರು.

ಧರ್ಮಗಳ ಮಧ್ಯೆ ಒಡಕಿನ ಬೆಳವಣಿಗೆ ನಡೆದಾಗ ಮೌನವಾಗಿದ್ದು, ಮನೆ ಸೇರಿಕೊಂಡಿದ್ದ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದ್ದಾಗ ಕಾಂಗ್ರೆಸ್ ನಾಯಕರ ಒಬ್ಬರ ಉಸಿರೂ ಇರಲಿಲ್ಲ, ಅಂದೇಕೆ ಕಾಂಗ್ರೆಸ್ ನಾಯಕರು ಮೌನವಾಗಿದ್ದೇಕೆ, ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದವರು ಆಗೇಕೆ ಬೀದಿಗೆ ಇಳಿಯಲಿಲ್ಲ. ಜನತೆಯ ಸಮಸ್ಯೆ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್, ಬಿಜೆಪಿ ಎರಡೂ ರಾಜಕೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜನತೆ ಎಷ್ಟು ದಿನ ಇದನ್ನು ಸಹಿಸುವುದು. ಅಂತಿಮವಾದ ತೀರ್ಮಾನ ಮಾಡಲು ಜನತೆಯೂ ನಿರ್ಧರಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next