Advertisement

HD Kumaraswamy ಮುನಿಸು ತಾತ್ಕಾಲಿಕ: ಛಲವಾದಿ ನಾರಾಯಣಸ್ವಾಮಿ

10:04 PM Jul 31, 2024 | Team Udayavani |

ರಾಯಚೂರು: ಬಿಜೆಪಿ ಪಾದಯಾತ್ರೆಗೆ ಕೇಂದ್ರ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮುನಿಸು ತಾತ್ಕಾಲಿಕ. ಅವರು ಕೂಡ ಪಾದಯಾತ್ರೆಗೆ ಬಂದೇ ಬರುತ್ತಾರೆ ಎಂದು ವಿಧಾನ ಪರಿಷತ್‌ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಡಾ ಹಗರಣ ವಿರುದ್ಧ ಬಿಜೆಪಿ ಮೈಸೂರುವರೆಗೂ ಆ.3ರಿಂದ ಹಮ್ಮಿಕೊಂಡಿರುವ ಪಾದಯಾತ್ರೆಗೆ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ನೆರೆಯಿಂದ ಜನರು ತತ್ತರಿಸಿದ್ದಾರೆ ಎನ್ನುವ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಈಗ ಪಾದಯಾತ್ರೆ ಬೇಡವೆಂದಿದ್ದಾರೆ ವಿನಾ ಬೇರೆ ಉದ್ದೇಶದಿಂದಲ್ಲ. ಅವರ ಮುನಿಸು ತಾತ್ಕಾಲಿಕವಾಗಿದ್ದು, ಅವರೂ ಪಾದಯಾತ್ರೆಗೆ ಬರುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next