Advertisement

ಆಯುರ್ವೇದದ ಮೊರೆ ಹೋದ ಎಚ್‌.ಡಿ.ದೇವೇಗೌಡ

11:25 PM May 11, 2019 | Team Udayavani |

ಕಾಪು: ಪತ್ನಿ ಚೆನ್ನಮ್ಮ ಅವರೊಂದಿಗೆ ಪ್ರಕೃತಿ ಚಿಕಿತ್ಸೆಗಾಗಿ ಮೂಳೂರು ಸಾಯಿರಾಧಾ ಹೆರಿಟೇಜ್‌ಗೆ ಆಗಮಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು, ದೇಹದ ಚೈತನ್ಯವನ್ನು ವರ್ಧಿಸಿಕೊಳ್ಳುವ ಉದ್ದೇಶದಿಂದ ಆಯುರ್ವೇದ ವೈದ್ಯ ಡಾ| ತನ್ಮಯ್‌ ಗೋಸ್ವಾಮಿ ಅವರ ಸಲಹೆಯಂತೆ ವಿವಿಧ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.

Advertisement

ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ಮೂಳೂರಿಗೆ ಆಗಮಿಸಿರುವ ಗೌಡರು, ಈ ಬಾರಿ ಪತ್ನಿ ಚೆನ್ನಮ್ಮ ಅವರನ್ನೂ ಕರೆದುಕೊಂಡು ಬಂದಿದ್ದಾರೆ. ಇಬ್ಬರೂ ತಮ್ಮ ವಯೋಸಹಜ ತೊಂದರೆಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ವಿವಿಧ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.

ಇಬ್ಬರೂ ಮೇ 16ರವರೆಗೂ ಮೂಳೂರು ರೆಸಾರ್ಟ್‌ನಲ್ಲಿ ತಂಗಿ, ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ. ಈ ಬಾರಿ, ಆಯುರ್ವೇದ ಪಂಚಕರ್ಮ ಚಿಕಿತ್ಸೆ ಮತ್ತು ರಸಾಯನ ಆಯುರ್ವೇದ ಚಿಕಿತ್ಸೆಗೆ ಒತ್ತು ನೀಡಿರುವ ಡಾ| ತನ್ಮಯ್‌ ಗೋಸ್ವಾಮಿ ನೇತೃತ್ವದ ವೈದ್ಯರ ತಂಡ, ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರ ಆರೋಗ್ಯದ ಬಗ್ಗೆ ವಿಶೇಷ ಮುತುವರ್ಜಿ ನೀಡಿ ಶುಶ್ರೂಷೆ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next