Advertisement

ಶೀಲ ಶಂಕಿಸಿ ಪತ್ನಿಯನ್ನು ಸುಟ್ಟು ಕೊಂದಿದ್ದ ವ್ಯಕ್ತಿಯ ಜೀವಾವಧಿ ಜೈಲು ಶಿಕ್ಷೆ ಖಾಯಂ

09:13 AM May 12, 2019 | Team Udayavani |

ಮಧುರೆ : 2011ರಲ್ಲಿ ತಿರುನೆಲ್ವೇಲಿಯಲ್ಲಿ ಪತ್ನಿಯನ್ನು ಕೊಂದಿದ್ದ ಆರೋಪಿ ಪತಿಗೆ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಜೈಲು ಶಿಕ್ಷೆಯ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿದೆ.

Advertisement

ಪತ್ನಿಯ ಶೀಲ ಶಂಕಿಸಿದ್ದ ಪತಿ ಮಣಿಕಂಠನ್‌ ಆಕೆಯ ಮೇಲೆ ಕುದಿವ ಹಾಲು ಮತ್ತು ಸೀಮೆ ಎಣ್ಣೆ ಸುರಿದು ಬಳಿಕ ಬೆಂಕಿ ಹಚ್ಚಿ ಸುಟ್ಟು ಕೊಂದಿದ್ದ.

2016ರಲ್ಲಿ ವಿಚಾರಣಾ ನ್ಯಾಯಾಲಯ ಮಣಿಕಂಠನ್‌ ಗೆ ಜೀವಾವಧಿ ಜೈಲು ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಆತ ಮದ್ರಾಸ್‌ ಹೈಕೋರ್ಟ್‌ ಮೆಟ್ಟಲೇರಿದ್ದ.

ಜಸ್ಟಿಸ್‌ಗಳಾದ ಪಿ ಎನ್‌ ಪ್ರಕಾಶ್‌ ಮತ್ತು ಬಿ ಪುಗುಲೇಂಧಿ ಅವರನ್ನು ಒಳಗೊಂಡ ಹೈಕೋರ್ಟಿನ ಮಧುರೆ ವಿಭಾಗೀಯ ಪೀಠ ಮಣಿಕಂಠನ್‌ ನ ಜೀವಾವಧಿ ಜೈಲುಶಿಕ್ಷೆಯನ್ನು ಖಾಯಂ ಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next