Advertisement

ಅಕ್ರಮ ಆಸ್ತಿ ಕೇಸು ವಜಾಕ್ಕೆ ಕೋರ್ಟ್‌ ನಕಾರ:ಸಿಎಂ ವೀರಭದ್ರಗೆ ಹಿನ್ನಡೆ

12:28 PM Mar 31, 2017 | Team Udayavani |

ಹೊಸದಿಲ್ಲಿ : ಸಿಬಿಐ ತಮ್ಮ ವಿರುದ್ಧ ದಾಖಲಿಸಿರುವ ಆದಾಯ ಮೀರಿದ ಆಸ್ತಿ ಕೇಸನ್ನು ರದ್ದು  ಮಾಡಬೇಕೆಂದು ಕೋರಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಮತ್ತು ಅವರ ಪತ್ನಿ ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್‌ ವಜಾ ಮಾಡಿದೆ. 

Advertisement

2015ರ ಅಕ್ಟೋಬರ್‌ 1ರಂದು ಹಿಮಾಚಲ ಪ್ರದೇಶ ಹೈಕೋರ್ಟ್‌ ಹೊರಡಿಸಿದ್ದ, “ನ್ಯಾಯಾಲಯದ ಅನುಮತಿ ಇಲ್ಲದೆ ಬಂಧಿಸುವ, ಪ್ರಶ್ನಿಸುವ ಅಥವಾ ಚಾರ್ಜ್‌ ಶೀಟ್‌ ಸಲ್ಲಿಸುವಲ್ಲಿ ಸಿಬಿಐ ಅನ್ನು ನಿರ್ಬಂಧಿಸುವ’ ತಾತ್ಕಾಲಿಕ ಆದೇಶವನ್ನು ಕೂಡ ಜಸ್ಟಿಸ್‌ ವಿಪಿನ್‌ ಸಾಂಘಿ  ಅವರು ತೆರವುಗೊಳಿಸಿ, ಸಿಬಿಐ ನ ಮಾರ್ಗವನ್ನು ಸುಗಮಗೊಳಿಸಿದರು. 

“ರಿಟ್‌ ಪಿಟಿಷನ್‌ ಅನ್ನು ವಜಾ ಮಾಡಲಾಗಿದೆ; ಸ್ಟೇ ತೆರವುಗೊಳಿಸಲಾಗಿದೆ’ ಎಂದು ನ್ಯಾಯಾಲಯ ಹೇಳಿತು. 

ಸಿಂಗ್‌ ಅವರು ತಮ್ಮ ಹಾಗೂ ಪತ್ನಿಯ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್‌ ಅನ್ನು ವಜಾ ಮಾಡುವಂತೆ ಕೋರಿದ್ದರು. ತಮ್ಮ ಮನೆಗೆ ದಾಳಿ ನಡೆಸುವ ಮೂಲಕ ಸಿಬಿಐ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿತ್ತು ಮಾತ್ರವಲ್ಲದೆ ತನ್ನ ವಿರುದ್ದದ ಸಿಬಿಐ ಕ್ರಮವು ರಾಜಕೀಯ ವೈಷಮ್ಯ ಹಾಗೂ ಸೇಡಿನ ಕ್ರಮವಾಗಿತ್ತು ಎಂದು ವಾದಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next