Advertisement

ಅತ್ಯಾಚಾರ ಆರೋಪಿ ಪಾದ್ರಿಗೆ ಕೇರಳ ಹೈಕೋರ್ಟ್‌ ಜಮೀನು

05:45 PM Jul 23, 2018 | Team Udayavani |

ಕೊಚ್ಚಿ : ಕೇರಳದ ಪಟ್ಟಣತಿಟ್ಟ ಜಿಲ್ಲೆಯಲ್ಲಿ ವಿವಾಹಿತೆಯ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕೆ ಗುರಿಯಾಗಿರುವ ಕ್ರೈಸ್ತ ಪಾದ್ರಿಗೆ ಕೇರಳ ಹೈಕೋರ್ಟ್‌ ಇಂದು ಸೋಮವಾರ ಜಾಮೀನು  ಮಂಜೂರು ಮಾಡಿದೆ. 

Advertisement

ಕಳೆದ ಜು.13ರಂದು ಜಿಲ್ಲೆಯ ಕೊಳಂಚೇರಿ ಎಂಬಲ್ಲಿಂದ ಮಲಂಕಾರಾ ಸಿರಿಯನ್‌ ಚರ್ಚಿನ ಸಲಹೆಗಾರರಾದ ಜಾನ್ಸನ್‌ ವಿ ಮ್ಯಾಥ್ಯೂ ಅವರನ್ನು ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ  ಐಪಿಸಿ ಸೆ.354 (ಮಹಿಳೆಯ ಮಾನಹರಣ) ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. 

ಜಾನ್ಸನ್‌ ಮ್ಯಾಥ್ಯೂ ಅವರು ಸಂತ್ರಸ್ತ ಮಹಿಳೆಯ ವಿರುದ್ದ ಲೈಂಗಿಕ ದೌರ್ಜನ್ಯ ಎಸಗಿದ ಮೂರನೇ ಆರೋಪಿ ಪಾದ್ರಿಯಾಗಿದ್ದಾರೆ. ತಿರುವಳ್ಳ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಇವರ ಜಾಮೀನು ಕೋರಿಕೆಯನ್ನು ಅರ್ಜಿಯನ್ನು ನಿರಾಕರಿಸಿದ ಬಳಿಕ ಇವರು ಹೈಕೋರ್ಟ್‌ ಮೆಟ್ಟಲೇರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next