Advertisement

2007ರ ಗೋರಖ್‌ಪುರ ದೊಂಬಿ ಪ್ರಕರಣ: ಹೈಕೋರ್ಟಿನಿಂದ ಅರ್ಜಿ ವಜಾ

12:11 PM Feb 23, 2018 | Team Udayavani |

ಅಲಹಾಬಾದ್‌: ಈಗ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಮತ್ತು ಅಂದು ಗೋರಖ್‌ಪುರ ಸಂಸದರಾಗಿದ್ದ ಯೋಗಿ ಆದಿತ್ಯನಾಥ್‌ ಅವರನ್ನು ಓರ್ವ ಆರೋಪಿಯಾಗಿ ಹೆಸರಿಸಲಾಗಿರುವ 2007ರ ಗೋರಖ್‌ಫ‌ುರ ದೊಂಬಿ ಪ್ರಕರಣದ ಎಫ್ಐಆರ್‌ ಬಗ್ಗೆ ಸ್ವತಂತ್ರ ತನಿಖೆಯನ್ನು ಕೋರಿದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾ ಮಾಡಿದೆ.

Advertisement

ಪರ್ವೇಜ್‌ ಪರ್ವಾಜ್‌ ಮತ್ತು ಅಸದ್‌ ಹಯಾತ್‌ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟಿಸ್‌ ಕೃಷ್ಣ ಮುರಾರಿ ಮತ್ತು ಜಸ್ಟಿಸ್‌ ಅಖೀಲೇಶ್‌ ಚಂದ್ರ ಶರ್ಮಾ ಅವರನ್ನು ಒಳಗೊಂಡ ಪೀಠವು ವಜಾ ಮಾಡಿತು.

ಪ್ರಶ್ನಿಸಲ್ಪಟ್ಟಿರುವ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಾನೂನು ಕ್ರಮ ಮಂಜೂರಾತಿಯನ್ನು ನಿರಾಕರಿಸಲಾದ ಆದೇಶದಲ್ಲಿ ಯಾವುದೇ ಲೋಪ ದೋಷಗಳಿಲ್ಲದಿರುವುದರಿಂದ ಪೀಠವು ಅರ್ಜಿಯನ್ನು ವಜಾ ಮಾಡುತ್ತಿದೆ ಎಂದು ತನ್ನ ಆದೇಶದಲ್ಲಿ  ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next