Advertisement

ಬೀದಿನಾಯಿ ಸ್ವಭಾವತಃ ಅಪಾಯಕಾರಿಯಲ್ಲ!

11:45 PM Aug 02, 2021 | Team Udayavani |

ಕೊಚ್ಚಿ: “ಕೆಲವೊಂದು ಸನ್ನಿವೇಶಗಳು ನಾಯಿಗಳನ್ನು ಕ್ರೂರವಾಗಿ ವರ್ತಿಸುವಂತೆ ಮಾಡುತ್ತವೆಯೇ ಹೊರತು, ಸ್ವಭಾವತಃ  ಬೀದಿ ನಾಯಿಗಳು ಅಪಾಯಕಾರಿ ಎಂಬುದು ಸತ್ಯಕ್ಕೆ ದೂರವಾದದ್ದು.

Advertisement

‘ ಹೀಗೆಂದು ಹೇಳಿರುವುದು ಕೇರಳ ಹೈಕೋರ್ಟ್‌. ಎರ್ನಾಕುಲಂನ ತ್ರಿಕ್ಕಾರಾದಲ್ಲಿ  ಬೀದಿನಾಯಿಗಳಿಗೆ ವಿಷ ಹಾಕಿ ಕೊಲ್ಲುತ್ತಿರುವ ವಿಡೀಯೋಗೆ ಸಂಬಂಧಿಸಿ ವಿಚಾರಣೆ ನಡೆಸುವ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಜನರನ್ನು ರಕ್ಷಿಸಬೇಕೆಂದರೆ ಬೀದಿನಾಯಿಗಳನ್ನು ಕೊಲ್ಲಬೇಕು ಎನ್ನುವುದು  ಸ‌ರಿಯಲ್ಲ. ನಾಯಿಗಳಿಗೆ ಆಶ್ರಯತಾಣಗಳಲ್ಲಿ ಪುನರ್ವಸತಿ ಕಲ್ಪಿಸುವ ಕೆಲಸವಾಗಲಿ. ಸುತ್ತಿಗೆ ಬಳಸಿಕೊಂಡು ನಾಯಿ ಹಿಡಿಯುವಂಥ ಕೆಲಸ ಮಾಡಬೇಡಿ ಎಂದೂ ಪಾಲಿಕೆಗೆ ಕೋರ್ಟ್‌ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next