Advertisement

Haveri; ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

02:14 PM Jan 24, 2024 | Team Udayavani |

ಹಾವೇರಿ: ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಜಾನುವಾರು ಮಾರುಕಟ್ಟೆ ಬಳಿಯ ಹಾನಗಲ್ ರಸ್ತೆಯಲ್ಲಿ ಸೋಮವಾರ ನಡೆದಿದೆ

Advertisement

ಅಪಘಾತದಲ್ಲಿ ಮೃತಪಟ್ಟವರನ್ನು ನಗರದ ಲಕ್ಷ್ಮಿ ಆಯಿಲ್ ಮಿಲ್ ಮಾಲೀಕರಾದ ಅರುಣಕುಮಾರ ವೀರಣ್ಣ ಕೋರಿ (51) ಎಂದು ಗುರುತಿಸಲಾಗಿದೆ.

ಹಾನಗಲ್ ರಸ್ತೆ ಯಲ್ಲಿ ಬೈಕ್ ನಲ್ಲಿ ಬರುತ್ತಿದ್ದಾಗ ಅರುಣಕುಮಾರ ಕೋರಿ ಅವರ‌ ಬೈಕ್ ಗೆ ಟಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗಡೆ ಬಿದ್ದ ಅರುಣಕುಮಾರ ಅವರ ಮೇಲೆ ಟಿಪ್ಪರ್ ಹರಿದು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಟಿಪ್ಪರ್ ಹಾಗೂ ಟಿಪ್ಪರ್ ಚಾಲಕನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next