Advertisement

ಹ್ಯಾಟ್ರಿಕ್‌ ಹೀರೋ ಹರ್ಷಲ್‌ ಪಟೇಲ್‌

10:09 PM Sep 27, 2021 | Team Udayavani |

ದುಬಾೖ: “ಇಂಥದೊಂದು ವಿದ್ಯಮಾನ ನನ್ನ ಬದುಕಿನಲ್ಲಿ ಸಂಭವಿಸಿದ್ದು ಇದೇ ಮೊದಲು. ನಾನು ಸ್ಕೂಲ್‌ ಗೇಮ್‌ಗಳಲ್ಲೂ ಹ್ಯಾಟ್ರಿಕ್‌ ಪಡೆದವನಲ್ಲ. ಹೀಗಾಗಿ ಈ ಅನುಭವವನ್ನು ಬಣ್ಣಿಸುವುದು ಬಹಳ ಕಷ್ಟ’ ಎಂದಿದ್ದಾರೆ ಆರ್‌ಸಿಬಿ ತಂಡದ ವೇಗಿ ಹರ್ಷಲ್‌ ಪಟೇಲ್‌. ಅವರು ಈ ಋತುವಿನ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಮೊದಲ ಬೌಲರ್‌ ಆಗಿದ್ದಾರೆ.

Advertisement

ಮುಂಬೈ ಇಂಡಿಯನ್ಸ್‌ ಎದುರಿನ ರವಿವಾರ ರಾತ್ರಿಯ ಮುಖಾಮುಖಿಯಲ್ಲಿ ಹರ್ಷಲ್‌ ಪಟೇಲ್‌, 17ನೇ ಓವರಿನ ಮೊದಲ 3 ಎಸೆತಗಳಲ್ಲಿ ಪಾಂಡ್ಯ, ಪೊಲಾರ್ಡ್‌ ಮತ್ತು ರಾಹುಲ್‌ ಚಹರ್‌ ಅವರನ್ನು ಔಟ್‌ ಮಾಡುವ ಮೂಲಕ ಹ್ಯಾಟ್ರಿಕ್‌ ಹೀರೋ ಎನಿಸಿಕೊಂಡರು. ಇವರ ಸಾಹಸದಿಂದ ಮುಂಬೈ ವಿರುದ್ಧ ಆರ್‌ಸಿಬಿ 54 ರನ್ನುಗಳ ಜಯಭೇರಿ ಮೊಳಗಿಸಿತು. ಉದ್ಘಾಟನಾ ಪಂದ್ಯದಲ್ಲೂ ಮುಂಬೈಯನ್ನು ಮಣಿಸುವಲ್ಲಿ ಹರ್ಷಲ್‌ ಪಟೇಲ್‌ ಪಾತ್ರ ಪ್ರಮುಖವಾಗಿತ್ತು. ಅಲ್ಲಿ ಅವರು 27 ರನ್ನಿಗೆ 5 ವಿಕೆಟ್‌ ಕೆಡವಿದ್ದರು.

ಹರ್ಷಲ್‌ ಪಟೇಲ್‌ ಸರ್ವಾಧಿಕ 23 ವಿಕೆಟ್‌ ಸಾಧನೆಯೊಂದಿಗೆ ಈ ಋತುವಿನ “ಪರ್ಪಲ್‌ ಕ್ಯಾಪ್‌’ಧಾರಿಯಾಗಿದ್ದಾರೆ. ಹೀಗಾಗಿ ಅವರು “ಪರ್ಪಲ್‌ ಪಟೇಲ್‌’! ಇದರಲ್ಲಿ 9 ವಿಕೆಟ್‌ಗಳನ್ನು ಅವರು ಮುಂಬೈ ವಿರುದ್ಧವೇ ಕೆಡವಿದ್ದಾರೆ.

ಇದನ್ನೂ ಓದಿ:ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಐವರ ಬಂಧನ

ಫಾರ್ಮ್ನ ಉತ್ತುಂಗದಲ್ಲಿ…
ಹರ್ಯಾಣದವರಾದ ಹರ್ಷಲ್‌ ಪಟೇಲ್‌ ಪಾಲಿಗೆ ಇದು “ಫಾರ್ಮ್ ಆಫ್ ಲೈಫ್’. ಕ್ರಿಕೆಟ್‌ ಬಾಳ್ವೆಯಲ್ಲಿ ಅವರೆಂದೂ ಇಷ್ಟು ಎತ್ತರ ತಲುಪಿದ್ದಿಲ್ಲ. ಆದರೆ ಮುಂಬರುವ ಟಿ20 ವಿಶ್ವಕಪ್‌ ತಂಡದಲ್ಲಿ ಪಟೇಲ್‌ ಹೆಸರು ಕಾಣಿಸಿಕೊಂಡಿಲ್ಲ. ಇದಕ್ಕೆ ಅವರು ಬೇಸರಪಟ್ಟಿದ್ದಾಗಲಿ, ವಿಷಾದ ಅನುಭವಿಸಿದ್ದಾಗಲಿ ಇಲ್ಲ.

Advertisement

“ನಾನು ಯಾವತ್ತೂ ಯಾವುದಕ್ಕೂ ವಿಷಾದಿಸಿದವನಲ್ಲ. ಆಯ್ಕೆಯ ನಿರ್ಧಾರ ನನ್ನ ಕೈಲಿಲ್ಲ. ಅದು ಕ್ಲಬ್‌ ಕ್ರಿಕೆಟ್‌, ಐಪಿಎಲ್‌, ಹರ್ಯಾಣ ಪರ ಇರಬಹುದು ಅಥವಾ ಅಥವಾ ಮುಂದೊಂದು ದಿನ ದೇಶದ ಪರ ಆಡಲಿಳಿದಾಗಲೂ ಇರ ಬಹುದು… ಬೌಲಿಂಗ್‌ ಅಥವಾ ಬ್ಯಾಟಿಂಗ್‌ ಮೂಲಕ ಪಂದ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವುದಷ್ಟೇ ನನ್ನ ಗುರಿ’ ಎಂಬುದಾಗಿ ಪಟೇಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next