Advertisement

Hassan ಡಿವೈಎಸ್ಪಿ ಖಾತೆಗೇ ಕನ್ನ ; 16 ಲಕ್ಷ ರೂ. ದೋಚಿದ ಖದೀಮರು

10:26 PM May 21, 2024 | Team Udayavani |

ಹಾಸನ: ಆನ್‌ಲೈನ್‌ ವಂಚಕರು ಹಾಸನ ಡಿವೈಎಸ್ಪಿ ಪಿ.ಕೆ. ಮುರಳೀಧರ್‌ ಅವರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ. ದೋಚಿರುವ ಪ್ರಕರಣ ನಡೆದಿದೆ. ಪಿ.ಕೆ. ಮುರಳೀಧರ, ಮಡಿಕೇರಿಯ ಕೆನರಾ ಬ್ಯಾಂಕ್‌ ಮುಖ್ಯಶಾಖೆ ಹಾಗೂ ಭಾಗಮಂಡಲ ಬ್ಯಾಂಕ್‌ ಶಾಖೆಯಲ್ಲಿ ಖಾತೆ ನಿರ್ವಹಿಸುತ್ತಿದ್ದಾರೆ.

Advertisement

ಸೋಮವಾರ ಮಧ್ಯಾಹ್ನ 1.30ರ ವೇಳೆ ಅವರ ಮೊಬೈಲ್‌ ಫೋನ್‌ಗೆ ಬಂದ ಸಂದೇಶಗಳನ್ನು ನೋಡಿದಾಗ ಅವರ ಬ್ಯಾಂಕ್‌ ಖಾತೆಗಳಿಂದ ಹಣ ಬೇರೆ, ಬೇರೆ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಒಂದು ಖಾತೆಯಿಂದ ಒಟ್ಟು 25 ವರ್ಗಾವಣೆ ಮೂಲಕ 12.10 ಲಕ್ಷ ರೂ. ಹಾಗೂ ಇನ್ನೊಂದು ಖಾತೆಯಿಂದ ವಿವಿಧ ಟ್ರಾನ್ಸಾಕ್ಷನ್‌ಗಳಲ್ಲಿ 3.88 ಲಕ್ಷ ರೂ. ಸೇರಿ ಒಟ್ಟು 15.98 ಲಕ್ಷ ರೂ. ದೋಚಿದ್ದಾರೆ. ಹಾಸನದ ಸೆನ್‌ ಅಪರಾಧಗಳ ತನಿಖಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next